ಕೈಗಳು ಶುಚಿಯಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ ; ಶೇಖ್ ತನ್ವೀರ್

ಕೈತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ – ಶೇಖ್ ತನ್ವೀರ್

0
101

ರಾಯಚೂರು,ಸಾರ್ವಜನಿಕರು ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಪ್ರಬಾರಿ ಜಿಲ್ಲಾಧಿಕಾರಿ ಶೇಖ್ ತನ್ವೀರ್ ಅಸೀಫ್ ಅವರು ಹೇಳಿದರು.
ನಗರದ ಬಸ್ ನಿಲ್ದಾಣದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಯುನಿಸೆಫ್,ಅರೋಗ್ಯ ನಿರ್ವಹಣೆ ಹಾಗೂ ಸಂಶೋಧನೆ ಸಂಸ್ಥೆ,ಸ್ವಾಮಿ ವಿವೇಕಾನಂದ ಯೂತ್ ಸಂಶೋಧನಾ ಸಂಸ್ಥೆ, ಮೂವ್‌ಮೆಂಟ್ , ರಾಯಚೂರು, ಎನ್.ಎಸ್.ಎಸ್ ಘಟಕ, ನವಯುಗ ಪದವಿ ಪೂರ್ವ ಕಾಲೇಜು,ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು,ಪ್ರತಿಯೊಬ್ಬರು ಊಟಕ್ಕೆ ಮೊದಲು ಸ್ವಚ್ಛವಾಗಿ ಕೈ ತೊಳೆದುಕೊಳ್ಳಬೇಕು.ಅಸ್ವಚ್ಛತೆ ಕಾರಣದಿಂದ ಅನೇಕರು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ.ಹೀಗಾಗಿ ಎಲ್ಲರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಶುಚ್ಚಿಯಾಗಿಟ್ಟು ಕೊಳ್ಳುವತ್ತ ಗಮನ ನೀಡಬೇಕು.ಕೈಗಳು ಶುಚಿಯಾಗಿದ್ದರೆ ಆರೋಗ್ಯವೂ ಉತ್ತಮವಾಗಿರುತ್ತದೆ ಎನುದನ್ನು ಇತರರಿಗೆ ತಿಳಿಸಬೇಕು ಎಂದರು.

LEAVE A REPLY

Please enter your comment!
Please enter your name here