ಇಂದು ಶ್ರೀ ರಾಘವೇಂದ್ರಸ್ವಾಮಿಗಳವರ ೪೨೮ನೇ ವರ್ಧಂತ್ಯೋತ್ಸವ
ಮಾನ್ವಿ: ಪಟ್ಟಣದ ಶ್ರೀ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಫೇ.೨೬ರಂದು ಶ್ರೀ ಸುಭುದೇಂದ್ರ ತೀರ್ಥರ ಸೇವಾ ಸಮಿತಿ, ತಾ.ಬ್ರಹ್ಮಣ ಸಮಾಜ ಮತ್ತು ಆರ್ಯವೈಶ್ಯ ಸಮಾಜ ವತಿಯಿಂದ ಶ್ರೀ ರಾಘವೇಂದ್ರಸ್ವಾಮಿಗಳವರ ೪೨೮ನೇ ವರ್ಧಂತ್ಯೋತ್ಸವ ಅಂಗವಾಗಿ ಬೆಳಿಗ್ಗೆ ೭ಕ್ಕೆ ಅಷ್ಠೋತ್ತರ ಪಾರಾಯಣ,ರಾಯರ ವೃಂದವನಕ್ಕೆ ವಿಶೇಷ ಪಂಚಾಮೃತ ಅಭಿಷೇಕ,ಕನಕ ಮಹಾಪೂಜೆ,ಮಹಾಮಂಗಳಾರತಿ, ಬೆ.೧೧-೩೦ಕ್ಕೆ ರಥೋತ್ಸವ, ಹಾಗೂ
ಬೆಂಗಳೂರಿನ ಪಂಡಿತ ಶ್ರೀಕಾಂತಾಚಾರ್ಯ ಇವರಿಂದ ಉಪನ್ಯಾಸ, ಪ್ರವಚನ,ಕಾರ್ಯಕ್ರಮಗಳು ನಡೆಯಲಿವೆ ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಶ್ರೀ ಮಠದಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ರಾಘವೇಂದ್ರಸ್ವಾಮಿಗಳ ಅನುದ್ರಹವನ್ನು ಪಡೆಯುವಂತೆ ಶ್ರೀ ಮಠದ ವತಿಯಿಂದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.