ಕ್ರಿಸ್ಮಸ್ ಹಬ್ಬದ ಅಂಗವಾಗಿ ವಿದ್ಯಾರ್ಥಿಗಳಿಂದ ನೃತ್ಯ ರೂಪಕ
ಮಾನ್ವಿ: ಪಟ್ಟಣದ ಬಿ.ವಿ.ಆರ್. ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಂದ ನಡೆದ ಕ್ರಿಸ್ಮಸ್ ಹಬ್ಬದ ವಿಶೆಷತೆಗಳನ್ನು ತಿಳಿಸುವ ರೂಪಕಗಳಿಗೆ ಚಾಲನೆ ನೀಡಿ ಬಿ.ವಿ.ಆರ್. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ.ವಿ.ರೆಡ್ಡಿ ಮಾತನಾಡಿ ಪ್ರತಿ ವರ್ಷ ಡಿಸೆಂಬರ್ ತಿಂಗಳ ೨೫ನೇ ದಿನವನ್ನು ಜಗತ್ತಿನಾದ್ಯಂತ ಯೇಸುಕ್ರಿಸ್ತನ ಜನ್ನದಿನವನ್ನು ಸಂಭ್ರಮದಿAದ ಆಚರಿಸಲಾಗುತ್ತದೆ . ಯೇಸುಕ್ರಿಸ್ತನು ಜಗತ್ತಿಗೆ ,ಶಾಂತಿಯ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದರು.
ಶಾಲೆಯ ಆವರಣದಲ್ಲಿ ವಿವಿಧ ತರಗತಿಯ ವಿದ್ಯಾರ್ಥಿಗಳು ಕ್ರಿಸ್ಮಸ್ ಹಬ್ಬದ ಕುರಿತು ನೃತ್ಯ ಪ್ರದರ್ಶಿಸಿದರು.ಹಾಗೂ ಕ್ರಿಸ್ಮಸ್ ಹಬ್ಬದ ಗೀತೆಗಳನ್ನು ಹಾಡಿದರು.ಪ್ರಜ್ಞಾ ರಿಂದ ಬೈಬಲ್ ಪಠಣ ನಡೆಯಿತು,
ಮಕ್ಕಳು ಸಂತಕ್ಲಾಸ್ ವೇಷಧಾರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಬಿ.ವಿ.ಪದ್ಮವತಿ, ಉಪಾಧ್ಯಕ್ಷರಾದ ಪ್ರವೀಣ್ ಕುಮಾರ ರೆಡ್ಡಿ, ಬಿ,ಭಾಸ್ಕರ್ ರೆಡ್ಡಿ, ಮುಖ್ಯಗುರು ಸರ್ಮತ್ಖಾನ್ ಸೇರಿದಂತೆ ಶಿಕ್ಷಕರಾದ ಬೆಂಜಮಿನ್, ಸುನಿತಾ, ಬಸ್ಸಮ್ಮ, ವಿದ್ಯಾರ್ಥಿಗಳು ಇದ್ದರು.
೨೨-ಮಾನ್ವಿ-೧:
ಮಾನ್ವಿ: ಪಟ್ಟಣದ ಬಿ.ವಿ.ಆರ್. ಶಿಕ್ಷಣ ಸಂಸ್ಥೆಯಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ರೂಪಕಗಳ ಪ್ರದರ್ಶನ ನಡೆಯಿತು