*ಲಿಂಗಸುಗೂರು : ಕೋವಿಡ್ ಸೇನಾನಿಗಳಿಗೆ ಗೌರವ ಸನ್ಮಾನ*
ಲಿಂಗಸುಗೂರು : ಭಾರತ ದೇಶಾದ್ಯಂತ ಸುಮಾರು 100 ಕೋಟಿ ಜನರಿಗೆ ಕೋವಿಡ್ ಲಸಿಕೆ ನೀಡಿದ ಆರೋಗ್ಯ ಸಿಬ್ಬಂಧಿಗಳಲ್ಲಿ ಶಾಮೀಲಾಗಿರುವ ತಾಲೂಕಿನ ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಭಾರತೀಯ ಜನತಾ ಪಾರ್ಟಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಬಿಜೆಪಿ ತಾಲೂಕಾಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಯುವ ಘಟಕದ ಅಧ್ಯಕ್ಷ ಈಶ್ವರ್ ವಜ್ಜಲ್, ಮುಖಂಡರಾದ ಡಾ.ಶಿವಬಸಪ್ಪ ಹೆಸರೂರು, ಗಿರಿಮಲ್ಲನಗೌಡ, ಜಗನ್ನಾಥ ಕುಲಕರ್ಣಿ, ಚನ್ನಬಸವ ಹಿರೇಮಠ, ರಾಜು ತಂಬಾಕೆ, ರಮೇಶ್ ಕಟ್ಟಿಮನಿ, ಮಹಿಳಾ ಘಟಕದ ಮುಖಂಡರಾದ ಶೋಭಾ ಕಾಟವಾ, ಜ್ಯೋತಿ ಸುಂಕದ, ಸ್ಮಿತಾ ಅಂಗಡಿ ಸೇರಿ ಇತರರು ಇದ್ದರು.