ಮಾನ್ವಿ:ಡಿ.25 ಯೇಸು ಕ್ರಿಸ್ತನು ಜಗತ್ತಿಗೆ ಶಾಂತಿಯನ್ನು ನೀಡಿದ್ದಾರೆ ಅವರ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದು ಸೇಂಟ್ ಮೇರಿಸ್ ಚರ್ಚ್ ಕೋನಾಪುರ ಪೇಟೆಯ ವಿಚಾರಣೆ ಗುರುಗಳಾದ ಫಾದರ್ ಜ್ಞಾನಪ್ರಕಾಶಂ ಹೇಳಿದರು.
ಪಟ್ಟಣದ ಕೋನಾಪುರ ಪೇಟೆಯ ಸೇಂಟ್ ಮೇರಿಸ್ ಚರ್ಚಿನಲ್ಲಿ ಬೆಳಗ್ಗೆ ನಡೆದ ಬಲಿಪೂಜೆಯ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದ ಅವರು ಯೇಸು ಕ್ರಿಸ್ತನು ವಿಶ್ವಕ್ಕೆ ಶಾಂತಿಯ ಸಂದೇಶ ನೀಡಿದ್ದಾರೆ.
ಯುವಕರು ದಂಪತಿಗಳು ಈಗಿನ ಜನಸಾಮಾನ್ಯರು ಇವರ ಶಾಂತಿ ಸಂದೇಶದ ಮಾರ್ಗದಲ್ಲಿ ನಡೆದರೆ ಜಗತ್ತಿನಲ್ಲಿ ಮಾದರಿಯಾಗಿ ಜೀವಿಸಲು ಸಾದ್ಯ ಎಂದು ಹೇಳಿದರು.ನಂತರ ನಿನ್ನೆ ಮಧ್ಯರಾತ್ರಿ ನಡೆದ ಬಲಿಪೂಜೆಯನ್ನು ಫಾದರ್ ರಾಬರ್ಟ್ ಅವರು ನೆರವೇರಿಸಿ ಯೇಸು ಕ್ರಿಸ್ತನ ಜನನ ಮತ್ತು ಅವರ ಜೀವನ ಸಂದೇಶಗಳನ್ನು ಕ್ರೈಸ್ತ ಭಕ್ತಾದಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಫಾದರ್ ಅರುಣ್ ಲೂಯಿಸ್ ಹಾಗೂ ಬೆಳಗಿನ ಬಲಿ ಪೂಜೆಗೆ ವಿವಿಧ ಗ್ರಾಮಗಳಿಂದ ಕ್ರೈಸ್ತ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.