ಸಿಂಧನೂರು.ಫೆ.6- ತಾಲ್ಲೂಕಿನ ಸಿದ್ರಾಂಪುರ ಗ್ರಾಮದ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರಕ್ಕೊಳಗಾಗಿ ಅತಂತ್ರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಸರ್ಕಾರ ನೆರವಾಗಬೇಕು ಎಂದು ಭೋವಿ ಸಮಾಜದ ಮುಖಂಡ ಹನುಮಂತ ಭೋವಿ ಹಂಚಿನಾಳ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಗಳ ಮೇಲೆ ಅತ್ಯಾಚಾರ ನಡೆದ ಘಟನೆಯಿಂದ ಮನನೊಂದು ಬಾಲಕಿಯ ತಂದೆ ಆತ್ಮಹತ್ಯೆಗೆ ಶರಣನಾಗಿದ್ದಾನೆ. ಇದರಿಂದಾಗಿ ಅವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ. ಸಮಾಜದಲ್ಲಿ ಬದುಕಿ ಬಾಳುವಂತಹ ವಾತಾವರಣ ಸೃಷ್ಠಿಸುವದರ ಜೊತೆಯಲ್ಲಿ ಸರಕಾರ ಆಕೆಗೆ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು. ಈ ಪ್ರಕರಣದ ಆರೋಪಿಯನ್ನು ಬಂಧಿಸಿದ ಪೊಲೀಸರನ್ನು, ಬಾಲಕಿಯ ಪರವಾಗಿ ಧ್ವನಿ ಎತ್ತಿದ ವಿವಿಧ ಸಂಘ-ಸAಸ್ಥೆಗಳು ಮಾಧ್ಯಮ ಸಹಕಾರವನ್ನು ಶ್ಲಾಘಿಸಿದರು.
- ಈ ಸಂದರ್ಭದಲ್ಲಿ ಭೋವಿ ಸಮಾಜದ ತಾಲೂಕಾಧ್ಯಕ್ಷ ಮರಿಯಪ್ಪ ಬಂಡಿ, ಮುಖಂಡರಾದ ದುರಗಪ್ಪ ಮಲ್ಲದಗುಡ್ಡ, ಬಸವರಾಜ ಸೋಮಲಾಪೂರ, ರಾಘವೇಂದ್ರ ಸೋಮಲಾಪೂರ, ಅಂಬಣ್ಣ ಗುಂಜಳ್ಳಿ, ಹನುಮೇಶ ಸಿದ್ದಾಪೂರ, ಯಂಕಪ್ಪ ಚಳ್ಳೂರು, ಲಕ್ಷಮಣ ಭೋವಿ, ಲಕ್ಷ್ಮಣ ಸಾಲಗುಂದಾ ಸೇರಿದಂತೆ ಅನೇಕರು ಇದ್ದರು.