ಮಾನ್ವಿ ವಿಧಾನ ಕ್ಷೇತ್ರದ ಚನಾವಣೆಗೆ ಬಹಿಷ್ಕರ : ಸದಾನಂದ ಪನ್ನೂರು

0
62

ಮಾನ್ವಿ ವಿಧಾನ ಕ್ಷೇತ್ರದ ಚನಾವಣೆಗೆ ಬಹಿಷ್ಕರ : ಸದಾನಂದ ಪನ್ನೂರು
ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿಗಳಿಗೆ ಉಪತಹಸೀಲ್ದಾರ್ ವಿನಾಯಕ್ ರಾವ್ ರವರ ಮೂಲಕ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಸದಾನಂದ ಪನ್ನೂರು ಮನವಿ ಸಲ್ಲಿಸಿ ಮಾತನಾಡಿ ತಾಲೂಕಿನ ವಿವಿಧ ಗ್ರಾಮಗಳು ರಾಜ್ಯ ಸರಕಾರದ ನಿರ್ಲಕ್ಷಕ್ಕೆ ಒಳಗಾಗಿದ್ದು ಅಭಿವೃದ್ದಿಯಿಂದ ವಂಚಿತವಾಗಿದ್ದರು ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಳ್ಳದೆ ಇರುವುದರಿಂದ ಹಲವು ವರ್ಷಗಳಿಂದ ಜನರು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ರಾಮದುರ್ಗ-ರಾಯಚೂರು ರಾಜ್ಯ ಹೆದ್ದಾರಿ-೧೪ ಸಂಪೂರ್ಣಹಾಳಗಿರುವುದರಿAದ ಈ ಭಾಗದ ಗ್ರಾಮಗಳಾದ ಜಾಗೀರ್ ಪನ್ನೂರು,ಚೀಕಲಪರ್ವಿ, ಗ್ರಾಮಗಳಿಗೆ ಸಂಚಾರ ಕಷ್ಟವಾಗಿದೆ,ಹಾಗೂ ಮುಷ್ಟೂರು ಗ್ರಾಮಕ್ಕೆ ಸಂಚಾರ ಕಲ್ಪಿಸುವ ಹಳ್ಳಕ್ಕೆ ಶೀಘ್ರವೇ ಸೇತುವೆ ನಿರ್ಮಾಣ ಮಾಡದೆ ಇರುವುದರಿಂದ ಮುಷ್ಟೂರು,ಚೀಕಲಪರ್ವಿ ಕ್ಯಾಂಪ್,ನಲ್ಗAದಿನ್ನಿ,ಜಾ,ಪನ್ನೂರು.ಯಡಿವಾಳ ಸೇರಿದಂತೆ ಇತರ ಗ್ರಾಮಗಳ ಜನರ ಸಂಚಾರಕ್ಕೆ ತೊಂದರೆಯಾಗಿದೆ ಆದ್ದರಿಂದ ಈ ಭಾಗದ ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸದೆ ಇರುವುದರಿಂದ ಮುಂಬರುವ ದಿನಗಳಲ್ಲಿ ೨೦೨೩ರಲ್ಲಿ ನಡೆಯುವ ಮಾನ್ವಿ ವಿಧಾನ ಕ್ಷೇತ್ರದ ಚನಾವಣೆಯಲ್ಲಿ ಮತದಾನ ಮಾಡದೆ ಬಹಿಷ್ಕರ ಹಾಕಲಾಗುವುದು ಎಂದು ತಿಳಿಸಿದರು.
ವಿರುಪಾಕ್ಷಪ್ಪ, ಕೆ.ಜೆ.ಆರ್.ಎಸ್, ರಾಜ್ಯಾಧ್ಯಕ್ಷ ಅಬ್ರಹಂ ಪನ್ನೂರು, ಅಯ್ಯಪ್ಪ, ಹುಚ್ಚಪ್ಪ, ಸೋಮಯ್ಯ, ದೇವರಾಜ, ಶಿವಲಿಂಗಪ್ಪ,ಬಸವರಾಜ ಹೇರಡ್ಡಿ, ಚನ್ನಕೇಶವರೆಡ್ಡಿ, ಹುಸೇನಪ್ಪ ಜಗ್ಲಿ, ಸೇರಿದಂತೆ ಇನ್ನಿತರರು ಇದ್ದರು.
೧೬-ಮಾನ್ವಿ-೬:
ಮಾನ್ವಿ:ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಮುಖ್ಯಮಂತ್ರಿಗಳಿಗೆ ದಲಿತ ಸಂಘರ್ಷ ಸಮಿತಿಯ ತಾಲೂಕು ಘಟಕದ ಅಧ್ಯಕ್ಷ ಸದಾನಂದ ಪನ್ನೂರು ಮನವಿ ಸಲ್ಲಿಸಿದರು.

LEAVE A REPLY

Please enter your comment!
Please enter your name here