ಆಲ್ದಾಳ ಗ್ರಾಮದ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಮಿಯ ವೈಭವದ ರಥೋತ್ಸವ

ಮಾನ್ವಿ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಅಂಗವಾಗಿ ಶಾಸಕ ಹಂಪಯ್ಯ ನಾಯಕರವರನ್ನು ಲಾಳಗೊಂಡರ ಸಮಾಜದ ಜಿಲ್ಲಾಧ್ಯಕ್ಷರಾದ ವೀರಭದ್ರಗೌಡ ಅಲ್ದಾಳ ಸನ್ಮಾನಿಸಿ ಗೌರವಿಸಿದರು.

0
83
  1. ಆಲ್ದಾಳ ಗ್ರಾಮದ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಮಿಯ ವೈಭವದ ರಥೋತ್ಸವ
    ಮಾನ್ವಿ: ತಾಲೂಕಿನ ಪ್ರಸಿದ್ದ ಪುಣ್ಯ ಕ್ಷೇತ್ರವಾದ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಶುಕ್ರವಾರ ಬೆಳಿಗ್ಗೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಮಿಗೆ ಮಹಾರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ, ಗೋಪುರಕ್ಕೆ ಕಳಸರೋಹಣ, ನೂತನ ರಥಕ್ಕೆ ಕಳಸಾರೋಹಣ ಹಾಗೂ ರಥಕ್ಕೆ ಹೂವಿನ ಅಲಂಕಾರ ಮಾಡಲಾಯಿತು. ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಉತ್ಸವ ಮೂರ್ತಿಗಳನ್ನು ಗ್ರಾಮದ ಮುಖ್ಯ ಬೀದಿಗಳಲ್ಲಿ ಪುರವಂತಿಗೆ ಹಾಗೂ ನಂದಿ ಧ್ವಜದೊಂದಿಗೆ ಮೆರವಣಿಗೆ ಮೂಲಕ ಆಗಮಿಸಿ ಉತ್ಸವ ಮೂರ್ತಿಗಳನ್ನು ರಥದಲ್ಲಿ ಕೂಡಿಸಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಜೆ ನೂತನ ರಥೋತ್ಸವ ನಡೆಯಿತು.
    ದೇವಸ್ಥಾನದ ಆವರಣದಲ್ಲಿನ ಅಗ್ನಿ ಕುಂಡದಲ್ಲಿ ಸಾವಿರಾರು ಹರಕೆಯನ್ನು ಹೊತ್ತಂತಹ ಭಕ್ತರು ಅಗ್ನಿ ಕುಂಡದಲ್ಲಿ ಪ್ರವೇಶ ಮಾಡಿ ಅಗ್ನಿಯಲ್ಲಿ ನಡೆದು ತಮ್ಮ ಹರಕೆಗಳನ್ನು ತಿರಿಸಿದರು.
    ಪುರವಂತಿಕೆ ಹಾಗೂ ಶಹನಾಯಿ ಕಾರ್ಯಕ್ರಮ ನಡೆಯಿತು.
    ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಸದ್ಭಕ್ತ ಮಂಡಳಿ ಹಾಗೂ ಶ್ರೀ ಬಸವೇಶ್ವರ ಯುವಕ ಮಂಡಳಿಯವರು ರಥೋತ್ಸವದಲ್ಲಿ ಭಕ್ತರಿಗೆ ಅಗತ್ಯವಾದ ಸೌಕರ್ಯಗಳನ್ನು ಕಲ್ಪಿಸಿದರು.
    ರಥೋತ್ಸವಕ್ಕೆ ಆಗಮಿಸಿದ ಶಾಸಕ ಹಂಪಯ್ಯ ನಾಯಕರವರಿಗೆ ಗ್ರಾಮಸ್ಥಾರ ಪರವಾಗಿ ಲಾಳಗೊಂಡರ ಸಮಾಜದ ಜಿಲ್ಲಾಧ್ಯಕ್ಷರಾದ ವೀರಭದ್ರಗೌಡ ಅಲ್ದಾಳ ಹಾಗೂ ಸಿದ್ದಪ್ಪಗೌಡ ಅಲ್ದಾಳರವರು ಸನ್ಮಾನಿಸಿ ಗೌರವಿಸಿದರು.
    ೨೩-ಮಾನ್ವಿ-೫:
    ಮಾನ್ವಿ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ವೈಭವದಿಂದ ನಡೆಯಿತು.
    ೨೩-ಮಾನ್ವಿ-೬:
    ಮಾನ್ವಿ: ತಾಲೂಕಿನ ಆಲ್ದಾಳ ಗ್ರಾಮದಲ್ಲಿನ ಶ್ರೀ ಭದ್ರಕಾಳಿ ಶ್ರೀವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಅಂಗವಾಗಿ ಶಾಸಕ ಹಂಪಯ್ಯ ನಾಯಕರವರನ್ನು ಲಾಳಗೊಂಡರ ಸಮಾಜದ ಜಿಲ್ಲಾಧ್ಯಕ್ಷರಾದ ವೀರಭದ್ರಗೌಡ ಅಲ್ದಾಳ ಸನ್ಮಾನಿಸಿ ಗೌರವಿಸಿದರು.

LEAVE A REPLY

Please enter your comment!
Please enter your name here