ಸಾಹಿತಿ ರಮೇಶಬಾಬು ಯಾಳಗಿಯವರನ್ನು ಸನ್ಮಾನಿಸಿದ ಕಲ್ಮಠ ಶ್ರೀಗಳು

ಮಾನ್ವಿ: ಪಟ್ಟಣದ ಕಲ್ಮಠ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾಹಿತಿ ರಮೇಶಬಾಬು ಯಾಳಗಿ ಅವರನ್ನು ಕಲ್ಮಠಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸನ್ಮಾನಿಸಿದರು

0
88

ಸಾಹಿತಿ ರಮೇಶಬಾಬು ಯಾಳಗಿಯವರನ್ನು ಸನ್ಮಾನಿಸಿದ ಕಲ್ಮಠ ಶ್ರೀಗಳು

ಮಾನ್ವಿ: ಪಟ್ಟಣದ ಕಲ್ಮಠ ಶ್ರೀ ವಿರೂಪಾಕ್ಷೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ವೇದಿಕೆಯಲ್ಲಿ ಡಿ.೨೯ರಂದು ಲಿಂಗಸೂಗುರು ಪಟ್ಟಣದಲ್ಲಿ ನಡೆಯುವ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಕಾರ್ಯಕ್ರಮದ ಅಂಗವಾಗಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ವತಿಯಿಂದ ೨೦೨೩ ನೇ ಸಾಲಿನಲ್ಲಿ ಕೊಡಮಾಡುವ ಶಿಕ್ಷಣ ತಜ್ಞ ಡಾ.ಎಚ್ ನರಸಿಂಹಯ್ಯ ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವ ಕಲ್ಮಠ ಕಾಲೇಜಿನ ಉಪನ್ಯಾಸಕ ಸಾಹಿತಿ ರಮೇಶಬಾಬು ಯಾಳಗಿ ಅವರನ್ನು ಕಲ್ಮಠ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಂಗಾರದ ಉಂಗುರವಿಟ್ಟು ಸನ್ಮಾನಿಸಿ ಗೌರವಿಸಿ ಮಾತನಾಡಿ ಕಲ್ಮಠ ಕಾಲೇಜಿನಲ್ಲಿ ಉಪಾನ್ಯಸಕರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿಗಳು , ಉತ್ತಮ ಬರಹಗಾರರು ಉತ್ತಮ ಭಾಷಣಕಾರರಾದ ರಮೇಶ ಬಾಬು ಯಾಳಗಿಯವರಿಗೆ ಶಿಕ್ಷಣ ತಜ್ಞ ಡಾ.ಎಚ್ ನರಸಿಂಹಯ್ಯ ರಾಜ್ಯ ಮಟ್ಟದ ಪ್ರಶಸ್ತಿ ದೊರೆತಿರುವುದು ನಮ್ಮ ಶಿಕ್ಷಣ ಸಂಸ್ಥೆಗೆ ಹೆಮ್ಮೆಯಾಗಿದೆ ಎಂದು ತಿಳಿಸಿದರು.

ಕಲ್ಮಠ ಶಾಲಾ ಕಾಲೇಜಿನ ಮುಖ್ಯಸ್ಥರಾದ ಮಂಜುನಾಥ ಕಮತರ, ಪ್ರಭಯ್ಯಸ್ವಾಮಿ, ಎಸ್. ಎಸ್. ಪಾಟೀಲ ಸಿದ್ದನಗೌಡ ಪಾಟೀಲ ,ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಕುರ್ಡಿ, ಸಿ.ಆರ್.ಪಿ ಶ್ರೀಧರರಾವ ದೇಸಾಯಿ, ಶಿವಯ್ಯಸ್ವಾಮಿ ಸೇರಿದಂತೆ ಇನ್ನಿತರರು ಇದ್ದರು.

೨೩-ಮಾನ್ವಿ-೪:

ಮಾನ್ವಿ: ಪಟ್ಟಣದ ಕಲ್ಮಠ ವಿದ್ಯಾಸಂಸ್ಥೆಯ ಆವರಣದಲ್ಲಿ ಸಾಹಿತಿ ರಮೇಶಬಾಬು ಯಾಳಗಿ ಅವರನ್ನು ಕಲ್ಮಠಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸನ್ಮಾನಿಸಿದರು

LEAVE A REPLY

Please enter your comment!
Please enter your name here