ಮಾನ್ವಿ: ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಕರ್ನಾಟಕ ಜಾಗೃತ ರೈತ ಸಂಘ ತಾಲೂಕು ಸಮಿತಿ ವತಿಯಿಂದ ಮುಖ್ಯಮಂತ್ರಿಗಳಿಗೆ ಉಪತಹಸೀಲ್ದಾರ್ ವಿನಾಯಕರಾವ್ರವರ ಮೂಲಕ ಮನವಿ ಸಲ್ಲಿಸಿ ತಾ.ಅಧ್ಯಕ್ಷ ಕೃಷ್ಣ ಮಾತನಾಡಿ ತಾಲೂಕಿನಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದು ರೈತರಿಗೆ ಬೆಳೆ ಪರಿಹಾರ ನೀಡಬೇಕು ಹಾಗೂ ಅತಿಸಣ್ಣ ರೈತರು ಬೆಳೆ ಬೆಳೆಯಲು ಬ್ಯಾಂಕ್ಗಳಲ್ಲಿ ಮಾಡಿದ ಬೆಳೆಸಾಲವನ್ನು ಮನ್ನಾ ಮಾಡಬೇಕು,ಕೃಷಿ ಯಂತ್ರಗಳ ಸಹಾಯಧನವನ್ನು ಹೆಚ್ಚಿಸಬೇಕು, ಭತ್ತ ಸೇರಿದಂತೆ ಇತರ ಬೆಳೆಗಳ ಖರೀದಿ ಕೇಂದ್ರಗಳನ್ನು ತೆರೆಯಬೇಕು,ಬಗರ್ ಹುಕುಂ ಸಾಗುವಳಿದಾರರಿಗೆ ಭೂ ಮಂಜೂರಾತಿ ಪ್ರಮಾಣ ಪತ್ರ ನೀಡಬೇಕು,ಸರಕಾರದಿಂದ ನಡೆದ ಜಿಮ್ ಸಮಾವೇಶದಲ್ಲಿ ಕೈಗೊಂಡ ರೈತ ವಿರೋಧಿ ಒಪ್ಪಂದಗಳನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.
ಪ್ರದೀಪ್ ಕಪಗಲ್, ಸದಾನಂದ ಪನ್ನೂರು, ಸುಮಿತ್ರಾ, ಮಂಜುನಾಥ, ಮೆಹಬೂಬ್, ಪೃಥ್ವಿ, ಬಾಬು, ಜಿ.ನರಸಿಂಹ, ವಸಂತ, ಮೆಹಬೂಬ್, ರಘು, ಈರಣ್ಣ, ಜಲಾಲ್, ರವಿ, ರಾಜು, ಬಸವರಾಜ, ಸೇರಿದಂತೆ ಇನ್ನಿತರರು ಇದ್ದರು.
೧೫-ಮಾನ್ವಿ:
ಮಾನ್ವಿ: ಪಟ್ಟಣದ ತಹಸೀಲ್ದಾರ ಕಚೇರಿ ಆವರಣದಲ್ಲಿ ಕರ್ನಾಟಕ ಜಾಗೃತ ರೈತ ಸಂಘ ತಾಲೂಕು ಸಮಿತಿ ವತಿಯಿಂದ ಉಪತಹಸೀಲ್ದಾರ್ ವಿನಾಯಕರಾವ್ರವರ ಮೂಲಕ ತಾ.ಅಧ್ಯಕ್ಷ ಕೃಷ್ಣ ಮನವಿ ಸಲ್ಲಿಸಿದರು.