ಶಿವನಗೌಡ ನಾಯಕ ಶಾಸಕರಿಂದ ಮಾನ್ವಿ ತಾಲೂಕಿನ ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರಧಾನ್ಯ ವಿತರಣೆ

ಸಂಕಷ್ಟದಲ್ಲಿ ಕೈಹಿಡಿಯುವ ಹಿರಿಯ ಅಣ್ಣ ಶಿವನಗೌಡ ನಾಯಕ ಎಂದು ಶ್ರೀ ಮಲ್ಲನ್ ಗೌಡ ನಕ್ಕುಂದಿ ಹೇಳಿದರು

0
140

ಅಲ್ ಹಿರಾ ಶಾಲೆಯಲ್ಲಿ ಶಿವನಗೌಡ ನಾಯಕ್ ಅಭಿಮಾನಿಗಳ ಬಳಗದಿಂದ ಖಾಸಗಿ ಶಾಲಾ ಶಿಕ್ಷಕರಿಗೆ ಆಹಾರಧಾನ್ಯದ ಕಿಟ್ ವಿತರಣೆ.

ಶಿಕ್ಷಕರು ದೇಶದ ಭವಿಷ್ಯವನ್ನು ನಿರ್ಮಿಸುವ ಕರ್ತೃ ಗಳಾಗಿದ್ದಾರೆ ಅವರ ಸಂಕಷ್ಟದಲ್ಲಿ ಅವರ ಕೈಹಿಡಿಯುವುದು ಮಾನವೀಯತೆಯ ಧರ್ಮ ಮಾನ್ಯ ಶಿವನಗೌಡ ನಾಯಕರು ಮಾನವೀಯತೆಯ ದೃಷ್ಟಿಯಿಂದ ಮಾನವಿ ಸಿರವಾರ ದೇವದುರ್ಗ ತಾಲೂಕಿನ ಎಲ್ಲಾ ಖಾಸಗಿ ಶಾಲಾ ಶಿಕ್ಷಕರಿಗೆ ಅಕ್ಷಯಪಾತ್ರ ಸಂಸ್ಥೆಯ ವತಿಯಿಂದ ಆಹಾರಧಾನ್ಯದ ಕಿಟ್ ವಿತರಣೆ ಮಾಡಿಸುವ ಕೆಲಸ ಮಾಡಿದ್ದಾರೆ ಇದು ಶಿವನಗೌಡ ನಾಯಕ್ ಅವರು ಕೇವಲ ಒಂದು ತಾಲೂಕಿನ ಶಾಸಕರಾಗಿದ್ದು ಮಾನವೀಯತೆಯ ದೃಷ್ಟಿಯಿಂದ ಮೂರು ತಾಲೂಕುಗಳ ಶಿಕ್ಷಕರಿಗೆ ಸಹಾಯ ಮಾಡುವ ಕೆಲಸ ಮಾಡಿ ಎಲ್ಲರ ಪಾಲಿಗೆ ಸಂಕಷ್ಟದಲ್ಲಿ ಕೈಹಿಡಿಯುವ ದೊಡ್ಡಣ್ಣ ಆಗಿದ್ದಾರೆ ಎಂದು ಬಿಜೆಪಿ ಮುಖಂಡ ಮಲ್ಲನಗೌಡ ನಕ್ಕುಂದಿ ಹೇಳಿದರು.

ಅವರು ಇಂದು ನಗರದ ಅಲ್ ಹಿರಾ ಶಾಲೆಯಲ್ಲಿ ಮಾನ್ಯ ಶಿವನಗೌಡ ನಾಯಕ ಅಭಿಮಾನಿ ಬಳಗ ನೇತೃತ್ವದಲ್ಲಿ ಬೆಂಗಳೂರಿನ ಅಕ್ಷಯಪಾತ್ರ ಸಂಸ್ಥೆಯ ವತಿಯಿಂದ ಮಾನ್ವಿ ತಾಲೂಕಿನ ಖಾಸಗಿ ಶಾಲಾ ಶಿಕ್ಷಕ-ಶಿಕ್ಷೇತರ ಸಿಬ್ಬಂದಿಗಳಿಗೆ ಆಹಾರಧಾನ್ಯದ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಿನ್ನೆ ಸಿರವಾರ ದಲ್ಲಿ ಮಾನ್ವಿ ಸಿರವಾರ ದೇವದುರ್ಗ ತಾಲೂಕಿನ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು ನಂತರ 1960 ಶಿಕ್ಷಕರ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೆ ಆಹಾರದ ಧಾನ್ಯದ ಪಟ್ಟಣ ವಿತರಿಸುವ ಸಾಂಕೇತಿಕ ಕಾರ್ಯಕ್ರಮ ನಡೆಸಿ ನಂತರ ಇಂದು ಅಲ್ ಹಿರಾ ಶಾಲೆಯಲ್ಲಿ ನಗರದ ಎಲ್ಲಾ ಖಾಸಗಿ ಶಾಲೆಗಳ ಶಿಕ್ಷಕರಿಗೆ ಆಹಾರಧಾನ್ಯದ ಕಿಟ್ ಗಳನ್ನ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು

ಮಾನ್ಯ ಶಿವನಗೌಡ ನಾಯಕ ಮತ್ತು ಅವರ ಅಭಿಮಾನಿ ಬಳಗ ಅಕ್ಷಯಪಾತ್ರ ಸಂಸ್ಥೆಯ ಸಹಕಾರದಿಂದ ಮಾನ್ವಿ ತಾಲೂಕಿನ ಖಾಸಗಿ ಶಾಲಾ ಶಿಕ್ಷಕರು ಸುಮಾರು ಎರಡು ವರ್ಷದಿಂದ ಕರೋನವೈರಸ್ ಸಮಸ್ಯೆಯಿಂದ ಆಗಿರುವಂತಹ ಲಾಕ್ಡೌನ್ ಮತ್ತದರ ಪರಿಣಾಮ ದಿಂದ ಶಾಲೆಗಳು ಬಂದ್ ಆಗಿದ್ದವು ಆದಕಾರಣ ಶಾಲಾ ಶಿಕ್ಷಕರು ಮತ್ತು ಶಾಲಾ ವ್ಯವಸ್ಥಾಪಕರು ಸರಕಾರದಿಂದ ಯಾವುದೇ ಸಾಹಕಾರ ಸಿಗದೆ ಇರುವುದರಿಂದ ಸಂಕಷ್ಟದಲ್ಲಿದ್ದರೂ ಇಂತಹ ಸಂದರ್ಭದಲ್ಲಿ ದಾನಿಗಳಾದ ಶಿವನಗೌಡ ನಾಯಕ್ ಅವರು ತನ್ನ ವೈಯಕ್ತಿಕ ಕಾಳಜಿಯಿಂದ ಅಕ್ಷಯಪಾತ್ರ ಸಂಸ್ಥೆಯ ವತಿಯಿಂದ ಆಹಾರಧಾನ್ಯದ ಕೀಟಗಳನ್ನು ವಿತರಿಸಲು ಕಾರಣೀಭೂತರಾಗಿದ್ದಾರೆ ಇದು ಬಹಳ ದೊಡ್ಡ ಕೆಲಸವಾಗಿದೆ ನಾವುಗಳು ಶಿವನಗೌಡ ನಾಯಕರಿಗೆ ಮತ್ತು ಅವರ ಅಭಿಮಾನಿಗಳ ಬಳಗಕ್ಕೆ ಮತ್ತು ಅಕ್ಷಯ ಪಾತ್ರಕ್ಕೆ ಹೃದಯಪೂರ್ವಕ ಧನ್ಯವಾದಗಳು  ಅರ್ಪಿಸುತ್ತೇವೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಖಾಸಗಿ ಶಾಲೆಗಳ ಒಕ್ಕೂಟದ ತಾಲೂಕ ಅಧ್ಯಕ್ಷ ಶರ್ಫುದ್ದೀನ್ ಪೋತ್ನಾಳ ಹೇಳಿದರು

ಮುಖ್ಯ ಅತಿಥಿಗಳಾಗಿ ಬಿಜೆಪಿ ಪಕ್ಷದ ಮುಖಂಡರು ಶ್ರೀ ಮಲ್ಲನಗೌಡ ನಕ್ಕುಂದಿ ಶ್ರೀ ತಿಮ್ಮರೆಡ್ಡಿ ಭೊಗಾವತಿ ವೀರೇಶ್ ನಾಯಕ ಬೆಟ್ಟದೂರು ಮತ್ತು ಪುರಸಭೆ ಸದಸ್ಯ ಹಾಗೂ ಖಾಸಗಿ ಶಾಲೆಗಳ ಒಕ್ಕೂಟದ ಉಪಾಧ್ಯಕ್ಷ ಫರೀದ್ ಉಮರಿ  ಹಾಗೂ ಎಂ ಎ ಎಚ್ ಮುಖೀಮ್  ಮಾತನಾಡಿದರು  ವೇದಿಕೆಯಲ್ಲಿ ವಿವಿಧ ಶಿಕ್ಷಕರಿಗೆ ಸಾಂಕೇತಿಕವಾಗಿ ಅಕ್ಷಯ ಪಾತ್ರೆ ಆಹಾರಧಾನ್ಯದ ಕಿಟ್ ವಾಹನಗಳ ಮೂಲಕ ತಮ್ಮ ತಮ್ಮ ಶಿಕ್ಷಕರಿಗೆ ಆಹಾರಧಾನ್ಯದ ಕಿಟ್ಟು ತಲುಪಿಸುವ ಕೆಲಸ ಮಾಡಲಾಯಿತು

ಈ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಜು ತಾಳಿಕೋಟಿ ಉಪಾಧ್ಯಕ್ಷ ಎಂ ಎ ಎಚ್ ಮುಕಿಂ ಮತ್ತು ಮುಖಂಡರಾದ ಅಲಿಮ್ ಖಾನ್ ಪುರಸಭಾ ನಾಮನಿರ್ದೇಶಿತ ಸದಸ್ಯ ಗಿರಯ್ಯ ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here