ಉದ್ಯಾನದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಾಂಪೌಂಡನ್ನು ನಾವೇ ಹೊಡೆಯಲು ಸಿದ್ಧ ; ಕೆ ನಾಗಲಿಂಗಸ್ವಾಮಿ

ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲು ಪುರಸಭೆ ಮುಖ್ಯಾಧಿಕಾರಿ ಕುಮ್ಮಕ್ಕು ನೀಡಿದ್ದಾರೆ ಅವರನ್ನು ಅಮಾನತುಗೊಳಿಸಬೇಕು

0
78

ಮಾನ್ವಿ.ಅ.೦೭-ಉದ್ಯಾನವನ ಜಾಗದಲ್ಲಿ ಎನ್.ಎಸ್.ಬೋಸರಾಜ್ ಅಕ್ರಮವಾಗಿ ಕಟ್ಟಿರುವ ಕಾಂಪೌಂಡನ್ನು ಒಡೆಯಲು ಸಿದ್ಧರಾಗಿದ್ದೇವೆ ಎಂದು ಉದ್ಯಾನವನ ಉಳಿಸಿ ಹೋರಾಟ ಸಮಿತಿಯ ಸಂಚಾಲಕರಾದ ಕೆ ನಾಗಲಿಂಗಸ್ವಾಮಿ ಹೇಳಿದರು.

ಪಟ್ಟಣದ ಹೃದಯ ಭಾಗದಲ್ಲಿರುವ ಉದ್ಯಾನವನಕ್ಕೆ ಮೀಸಲಿಟ್ಟ ಜಾಗದಲ್ಲಿ ಎನ್‌ಎಸ್.ಬೋಸರಾಜ್ ಅವರು ಅಕ್ರಮವಾಗಿ ಕಾಂಪೌಂಡನ್ನು ನಿರ್ಮಿಸಿದ್ದಾರೆ. ಉದ್ಯಾನವನ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದನ್ನು ತೆರವುಗೊಳಿಸಬೇಕೆಂದು ಉದ್ಯಾನ ಉಳಿಸಿ ಹೋರಾಟ ಸಮಿತಿ ವತಿಯಿಂದ ಅನಿರ್ದಿಷ್ಟ ಧರಣಿ ಹಾಕಿಕೊಂಡು ಇಲ್ಲಿಗೆ 74 ದಿನ ಕಳೆದರೂ ಅಧಿಕಾರಿಗಳು ಮಾತ್ರ ತಲೆಕೆಡಿಸಿಕೊಳ್ಳದೆ ಮೌನವಾಗಿದ್ದಾರೆ.

ಉದ್ಯಾನದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಾಂಪೌಂಡನ್ನು ಅಧಿಕಾರಿಗಳು ೨ ಗಂಟೆ ಒಳಗಾಗಿ ಕೆಡವಿದರೆ ಸರಿ ಇಲ್ಲವಾದರೆ ಇಂದು ಉದ್ಯಾನ ಉಳಿಸಿ ಹೋರಾಟ ಸಮಿತಿ ವತಿಯಿಂದ ಹಾಕಿಕೊಂಡಿರುವ ಅನಿರ್ದಿಷ್ಟ ಧರಣಿ ದಿಂದ ಮೆರವಣಿಗೆ ಮುಖಾಂತರ ಉದ್ಯಾನವನ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿರುವುದನ್ನು ಸುಮಾರು ೩ ಗಂಟೆಗೆ ನಾವೇ ಕೆಡವಲು ಸಿದ್ಧರಾಗಿದ್ದೇವೆ ಮತ್ತು ಅಕ್ರಮವಾಗಿ ಉದ್ಯಾನವನ ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಉದ್ಯಾನವನ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲು ಪುರಸಭೆ ಮುಖ್ಯಾಧಿಕಾರಿ ಕುಮ್ಮಕ್ಕು ನೀಡಿದ್ದಾರೆ ಅವರನ್ನು ಅಮಾನತುಗೊಳಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನರಸಪ್ಪ ಜೂಕುರ್, ಹನುಮಂತ ಸೀಕಲ್, ಯಲ್ಲಪ್ಪ ಊಟಕನೂರ್, ಬಸುರಾಜ್ ಬಾಗಲವಾಡ, ಪ್ರಕಾಶ್ ತಡಕಲ್, ಬಸವರಾಜ ಜಾನೇಕಲ್, ಯಂಕೋಬ ತಡಕಲ್, ಪ್ರಕಾಶ್ ಧೋತರಬಂಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here