ಕೊಪ್ಪಳ,ಅ.30:- ಕೊಪ್ಪಳದಲ್ಲಿ ಸಿನಿಮೀಯ ಸ್ಟೈಲ್ನಲ್ಲಿ ನಗರಸಭೆ ಸದಸ್ಯನ ಕಿಡ್ನಾಪ್ ಆಗಿದೆ. ಗಂಗಾವತಿ ನಗರ ಸಭೆ ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಕಿಡ್ನಾಪ್ ಆದವರು. ಬಿಜೆಪಿ ಪಕ್ಷದ ನಗರ ಸಭೆ ಸದಸ್ಯರು ಕಾಂಗ್ರೆಸ್ ಸದಸ್ಯನ ಕಿಡ್ನಾಪ್ ಮಾಡಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ
ಬಿಜೆಪಿಯ ಹಾಲಿ ಸದಸ್ಯರಾದ ಅಜಯ್ ಬಿಚ್ಚಾಲಿ,ನವೀನ ಪಾಟೀಲ್, ಪರಶುರಾಮ ಮಡ್ಟೆರ್, ಮಾಜಿ ಸದಸ್ಯ ರಾಚ್ಚಪ್ಪ ಸಿದ್ದಾಪುರ ಹಾಗೂ ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಸಹಚರರಾದ ರವಿ ಲಿಂಗರಾಜ ಕ್ಯಾಂಪ್, ಡಬರಿ ಶರಣ ಸೇರಿ ನಮ್ಮ ಸದಸ್ಯರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ದೂರಿದ್ದಾರೆ.
ಗಂಗಾವತಿಯ ನಕ್ಷತ್ರ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಊಟಕ್ಕೆ ಕುಳಿತಿದ್ದ ಮನೋಹರಸ್ವಾಮಿಯನ್ನು ಕರೆದೊಯ್ಯೋ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗಂಗಾವತಿ ನಗರ ಸಭೆ ಅಧ್ಯಕ್ಷ ಪಟ್ಟ ಹಿಡಿಯಲು ಬಿಜೆಪಿ ಕಿಡ್ನಾಪ್ ತಂತ್ರ ಮಾಡಿದೆ ಅನ್ನೋ ಆರೋಪವಿದೆ. ಈ ಸಂಬಂಧ 8 ಜನರ ವಿರುದ್ಧ ಗಂಗಾವತಿ ಠಾಣೆಯಲ್ಲಿ ಕೇಸ್ ದಾಖಲಾಗಿದೆ.