ಮಾನ್ವಿ: ಪಟ್ಟಣದ ಗ್ರಾಮ ದೇವತೆ ಶ್ರೀರಾಮಲಿಂಗ ಚೌಡೇಶ್ವರಿ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಶಾಸಕ ರಾಜಾ ವೆಂಕಟಪ್ಪ ನಾಯಕರು ತಮ್ಮ ಕುಟುಂಬ ಪರಿವಾರದೊಂದಿಗೆ ದೇವಸ್ಥಾನಕ್ಕೆ ತೆರಳಿ ಚೌಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಅಭಿವೃದ್ಧಿಗೆ ಶಾಸಕರ ಅನುದಾನದಲ್ಲಿ 4.ಲಕ್ಷ ರೂ. ನೀಡಿರುವದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರ ಕುಟುಂಬಸ್ಥರು ಹಾಗೂ ಪುರಸಭೆ ಹಿರಿಯ ಸದಸ್ಯ ರಾಜಾಮಹೇಂದ್ರ ನಾಯಕ, ಜೆಡಿಎಸ್ ರಾಜ್ಯ ಯುವ ಉಪಾಧ್ಯಕ್ಷ ರಾಜಾರಾಮಚಂದ್ರ ನಾಯಕ, ಮುಖಂಡರಾದ ವಕೀಲ ವೆಂಕಟನರಸಿಂಹ ಸಾದಾಪುರು, ವಕ್ತಾರ ನಾಗರಾಜ ಭೋಗಾವತಿ, ಜಿ.ಶಿವಶಂಕರ ಕುಮಾರ, ಜಿ.ಪ್ರಮೋದ್ ಶಂಕರ, ಮಲ್ಲಪ್ಪ ನಾಡಗೌಡ, ಸುರೇಶ ನಾಡಗೌಡ, ಚಂದಮರಿಯಪ್ಪ, ಬಸಪ್ಪ, ಜಿ.ಪ್ರೇಮಶಂಕರ, ಮಲ್ಲಿಕಾರ್ಜುನ, ಶೇಖರಪ್ಪ,ಶಂಕರ ವಠಾರ, ಹೆಚ್, ಸತೀಶ, ಬೊಗಿ ಬಸವ, ಪವನ ಕುಮಾರ ಹಿರೇಮಠ ಸೇರಿದಂತೆ ಅನೇಕರಿದ್ದರು.