ಶ್ರೀ ವಿಜಯದಾಸರ 266ನೇ ಆರಾಧನೆಯ ಪೂರ್ವಾರಾಧನೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಮಾನ್ವಿ: ತಾಲ್ಲೂಕಿನ ಚೀಕಲಪರ್ವಿ ಗ್ರಾಮದಲ್ಲಿನ ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಪಾದರಾಜರಿಂದ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಲಕ್ಷಿö್ಮÃ ನರಸಿಂಹ ದೇವಸ್ಥಾನದಲ್ಲಿನ ಶ್ರೀ ವಿಜಯದಾಸರ ಕಟ್ಟೆಯಲ್ಲಿ ಶ್ರೀ ವಿಜಯದಾಸರ 266ನೇ ಆರಾಧನೆಯ ಪೂರ್ವಾರಾಧನೆ ಅಂಗವಾಗಿ ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ ವತಿಯಿಂದ ನಡೆದ ಹರಿದಾಸವಾಣಿ ಕಾರ್ಯಕ್ರಮದಲ್ಲಿ ಸಂಗೀತ ವಿದ್ವಾನ್ ರಾಯಚೂರು ಶೇಷಗಿರಿದಾಸರು ವಿಜಯದಾಸರ ಹಾಗೂ ಇತರ ಭಕ್ತಿ ಗೀತೆಗಳನ್ನು ಹಾಡಿ ಸಭಿಕರನ್ನು ಭಾವಪರವಶರನ್ನಾಗಿಸಿದರು
ಕರ್ನಾಟಕ ಸಂಗೀತ ವಿದ್ವಾನ್ ಬೆಂಗಳೂರಿನ ಶ್ರೀ ನಿಧಿ ಆಚಾರ್ಯ ಇವರಿಂದ ದಾಸವಾಣಿ ಕಾರ್ಯಕ್ರಮ ನಡೆಯಿತು
ತಬಲ ಸಾಥ್ ಗೋಪಾಲ ಗುಡಬಂಡಿ, ಹಾರ್ಮೋನಿಯಂ ಶ್ರೀಪಾದದಾಸರು, ಗುಣಮಟ್ಟ ಆಚಾರ್ಯ ರಾಯಚೂರು ರವರು ತಳಾ ಸಾಥ್ ನೀಡಿದರು
ಶ್ರೀ ಗುರುಸಾರ್ವಭೌಮ ದಾಸಸಾಹಿತ್ಯ ಪ್ರಾಜೆಕ್ಟ್ನ ಅಧಿಕಾರಿ ಪಂಡಿತ್ ಸುಳಾದಿ ಹನುಮೇಶ್ ಆಚಾರ್ಯ,ಕೋ-ಅರ್ಡಿನೇಟರ್ ಅನಂತ ಪದ್ಮನಾಭರಾವ್ , ಶ್ರೀ ಮಠದ ಗೌರವ ವಿಚಾರಣಾಕರ್ತರಾದ ಶ್ರೀ ವಿಜಯೀಂದ್ರಾಚಾರ್ ಇಭರಾಮಪೂರ,ರಾಮಚಾರ್, ಅರ್ಚಕರು ,ವ್ಯವಸ್ಥಾಪಕರಾದ ಕೃಷ್ಣಮೂರ್ತಿಜೋಷಿ ,ರಾಘವೇಂದ್ರಚಾರ್,ರಾಘವೇAದ್ರರಾವ್ ದೇಸಾಯಿ,ಪ್ರಹ್ಲಾದಚಾರ್,ಕೃಷ್ಣಮೂರ್ತಿಗುಡಿ,ಗೋಪಾಲ ತಾ.ಬ್ರಹ್ಮಣರ ಸಂಘದ ಅಧ್ಯಕ್ಷರಾದ ಮುದುರಂಗರಾವ್ ಮುತಾಲಿಕ್ ಹಾಗೂ ತಾಲ್ಲೂಕಿನ ವಿಪ್ರ ಸಮಾಜದವರು ಭಾಗವಹಿಸಿದರು