ಮಾನ್ವಿ:ಏ.07. ತಾಲ್ಲೂಕು ಆಡಳಿತ ಸಮ್ಮುಖದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಬಡ ಕಾರ್ಮಿಕರಿಗೆ ದಿನನಿತ್ಯದ ದವಸ ಧಾನ್ಯಗಳ ಕಿಟ್ ವಿತರಣೆ ಮಾಡಿದರು.
ಪಟ್ಟಣದ ನಮಜಗರ ಗುಡ್ಡದ ಏರಿಯಾದಲಿ ವೆಂಕಪ್ಪ ತಾತನ ಮಠದ ಹತ್ತಿರ ಕಡು ಬಡವರಿಗೆ ಕೂಲಿ ಕಾರ್ಮಿಕರಿಗೆ ದಿನನಿತ್ಯದ ದವಸ ಧಾನ್ಯಗಳ ಕಿಟ್ಟನ್ನು ವಿತರಣೆ ಮಾಡಿ ನಂತರ ಮಾತನಾಡಿದ ಅವರು ಮಹಾಮಾರಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಲ್ಲ ಸಾರ್ವಜನಿಕರು ಮುಖಕ್ಕೆ ಮಾಸ್ಕ್ ಧರಿಸಿ ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು ಅನವಶ್ಯಕವಾಗಿ ಯಾರು ಕೂಡ ಹೊರಗಡೆ ತಿರುಗಾಡಬಾರದು 144 ಸೆಕ್ಷನ್ ಜಾರಿ ರುವುದರಿಂದ ಮೂರು ಅಥವಾ ನಾಲ್ಕು ಜನ ಸೇರಬಾರದೆಂದು ಹೇಳಿದರು.ಈ ಸಂದರ್ಭದಲ್ಲಿ ಜೆಡಿಎಸ್ ಯುವ ಮುಖಂಡರಾದ ರಾಜಾ ರಾಮಚಂದ್ರ ನಾಯಕ್, ಪುರಸಭೆ ಸದಸ್ಯರಾದ ಶರಣಪ್ಪ ಮೇದಾ, ಬಾಷ ಟೈಲರ್, ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮಿ, ಸಿಡಿಪಿಓ ಸುಭದ್ರದೇವಿ, ಶಿಕ್ಷಣ ಇಲಾಖೆ ಸಂಯೋಜಕರಾದ ವಲಿಬಾಬ, ಮಹೇಶ, ಪಿ ಎಸ್ ಐ ರಂಗಪ್ಪ ದೊಡ್ಡಮನಿ,ಎಪಿಎಂಸಿಯ ಕಾರ್ಯದರ್ಶಿಗಳಾದ ಎರೇಗೌಡ,ಸಾಮಾಜಿಕ ಅರಣ್ಯ ಇಲಾಖೆಯ ಅಧಿಕಾರಿ ವಿದ್ಯಾಶ್ರೀ,ಮೊಹಮ್ಮದ್ ಸ್ಮೈಲ್ ಜೆಡಿಎಸ್ ಮುಖಂಡರಾದ ನಾಗರಾಜ್ ಬೋಗವತಿ, ಶ್ರಿಧರ್ ಸ್ವಾಮಿ, ಪಿ.ರವಿಕುಮಾರ್ ವಕೀಲರು ಕೋನಾಪೂರು ಪೇಟೆ, ಆರ್. ಬಸವರಾಜ್ ಶೆಟ್ಟಿ, ಗೋಪಾಲ ನಾಯಕ ಹರವಿ, ವಿರೇಶ ನಾಯಕ, ಮಲ್ಲೇಶ ನಾಯಕ,ದೇವೇಗೌಡ ಉದ್ಬಾಳ ಹಾಗೂ ಉಪಸ್ಥಿತರಿದ್ದರು