ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ; ಎಸ್‌ಪಿ ಡಾ.ಸಿ.ಬಿ ವೇದಮೂರ್ತಿ

0
197

ಲಿಂಗಸುಗೂರು.ಜ.೦೮- ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ತೆರವು ಮಾಡಬೇಕೆಂದು ಎಸ್‌ಪಿ ಡಾ.ಸಿ.ಬಿ ವೇದಮೂರ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದಲ್ಲಿ ಪ್ರಮುಖ ರಸ್ತೆಗಳನ್ನು ವೀಕ್ಷಣೆ ಮಾಡಿದ ಎಸ್‌ಪಿಯವರು ಪಟ್ಟಣದ ರಸ್ತೆ ಬದಿಯಲ್ಲಿ ಹಲವು ವರ್ಷಗಳಿಂದ ಸಂಚಾರಕ್ಕೆ ಅಡ್ಡಿಯಾಗುತ್ತಿವೆ, ರಸ್ತೆ ಅಗಲೀಕರಣ ಮಾಡಿದರೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ ಎಂದು ಜೆಸ್ಕಾಂ ಎಇಇ ಬೆನ್ನಪ್ಪ ಕರಿಬಂಟನಾಳರವರಿಗೆ ಪ್ರಶ್ನಿಸಿದರು.
ಪಟ್ಟಣದ ಪ್ರಮುಖ ರಸ್ತೆಗಳಲ್ಲಿ 200 ವಿದ್ಯುತ್ ಕಂಬಗಳಿವೆ ಹಾಗೂ 15 ವಿದ್ಯುತ್ ಪರಿವರ್ತಕಗಳಿದ್ದು ಸ್ಥಳಾಂತರ ಮಾಡಲು ಕನಿಷ್ಠ 50-60 ಲಕ್ಷ ಹಣದ ಅಗತ್ಯವಿದೆ ಎಂದು ಎಸ್‌ಪಿಯವರಿಗೆ ಜೆಸ್ಕಾಂ ಎಇಇ ಕರಿಬಂಟನಾಳ ಮನವರಿಕೆ ಮಾಡಿದರು.
ಪಟ್ಟಣದ ಬಸ್ ನಿಲ್ದಾಣ ವೃತ್ತ, ಗಡಿಯಾರ ಚೌಕ್ ವೃತ್ತ, ಬಸವಸಾಗರ ವೃತ್ತದಲ್ಲಿ ಕಂಬಗಳ ತೆರವುಗೊಳಿಸಲು ಮುಂದಾಗಬೇಕು 5-6 ಲಕ್ಷದ ಹಣಕ್ಕೆ ಅಂದಾಜು ಪತ್ರಿಕೆ ತಯಾರಿಸಿ ಪುರಸಬೆಗೆ ಒದಗಿಸಬೇಕು, ಪುರಸಭೆ ಅನುದಾನದಲ್ಲಿ ತೆರವುಗೊಳಿಸಬೇಕು ಎಂದು ಎಸ್.ಪಿಯವರು ಸೂಚನೆ ನೀಡಿದರು.
ಈ ವೇಳೆ ಡಿವೈಎಸ್‌ಪಿ ಜಿ.ಹರೀಶ, ಸಿಪಿಐಗಳಾದ ಯಶವಂತ ಬಿಸನಳ್ಳಿ, ಮುದಗಲ್ ಪಿಎಸ್‌ಐಗಳಾದ ಡಾಕೇಶ ಸೇರಿದಂತೆ ಇದ್ದರು.

LEAVE A REPLY

Please enter your comment!
Please enter your name here