ಜಿಲ್ಲೆಯಾದ್ಯಂತ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣಿಕೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳಬೇಕು; ಅಂಬಣ್ಣ ಅರೋಲಿ
ಮಾನ್ವಿ: ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ದಲಿತ ಮುಖಂಡ ಅಂಬಣ್ಣ ಅರೋಲಿ ಮಾತನಾಡಿ ಜಿಲ್ಲೆಯಾದ್ಯಂತ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣಿಕೆ ದಂಧೆ ನಡೆಯುತ್ತಿದ್ದು ದಿ.೨೮ ರಂದು ದಲಿತ ಮುಖಂಡ ಬಸವರಾಜ ನಕ್ಕುಂದಿ ಅಕ್ಕಿ ಲಾರಿಯ ಬಗ್ಗೆ ಮಾಹಿತಿ ಕೊಟ್ಟಿದ್ದಕ್ಕೆ ಅವರ ಮೇಲೆ ಕೇಲವರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಹಾಗೂ ಮಾಹಿತಿ ನೀಡಿದ್ದ ಕೆಲ ಸಂಘಟನೆಗಳ ಮುಖಂಡರ ಮೇಲೆ ಸುಳ್ಳು ದೂರು ದಾಖಲಿಸಲಾಗಿದೆ.
ಅದ್ದರಿಂದ ಅಕ್ರಮ ಅಕ್ಕಿ ದಂಧೆಯನ್ನು ನಡೆಸುವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಗಡಿಪಾರು ಮಾಡಬೇಕು.ಸಂಘಟಕರ ಮೇಲಿನ ದೂರುಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ರವಿಂದ್ರನಾಥ ಪಟ್ಟಿ, ಎಂ.ಆರ್.ಬೇರಿ, ರಾಘವೇಮದ್ರ ಪೋರಟ್ಟಿ, ಶ್ರೀನಿವಾಸ್, ಸುಂದರ್ ಕಪಗಲ್, ಜೆ.ಬಿ.ರಾಜು, ಯಲ್ಲಪ್ಪ ಬಾದರದಿನ್ನಿ, ಹನುಮಂತ ಕೋಟೆ, ಪ್ರಭುರಾಜ್ ಕೊಡ್ಲಿ, ಮರಿಸ್ವಾಮಿ, ವಸಂತಕುಮಾರ, ಯೇಸು, ಪ್ರದೀಪ್ ಇದ್ದರು.