ಲಿಂಗಸುಗೂರು.ಜ.08- ಅಭಿವೃದ್ದಿಯಲ್ಲಿ ಶಾಸಕರು ರಾಜಕಾರಣ ಮಾಡುತ್ತಿದ್ದಾರೆಂದು ಆರೋಪಿಸಿ ಕೃಷಿ ಉತ್ಪನ್ನ ಮಾರುಕಟ್ಟೆ ವರ್ತಕರು ಶಾಸಕ ಡಿ.ಎಸ್.ಹೂಲಗೇರಿಯವರಿಗೆ ಮುತ್ತಿಗೆ ಹಾಕಿ ತರಾಟೆ ತೆಗೆದುಕೊಂಡರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯ ಹೊಸ ಪ್ರಾಂಗಣದಲ್ಲಿ ಇನ್ನೂ ಮಳಿಗೆಯೇ ನಿರ್ಮಾಣವಾಗಿಲ್ಲ ಅಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ಅಭಿವೃದ್ಧಿ ವಿಷಯದಲ್ಲಿ ಶಾಸಕರು ರಾಜಕಾರಣ ಮಾಡುವುದು ಸರಿಯಲ್ಲ. ಪ್ರಾಂಗಣದಲ್ಲಿ ಸುಮಾರು ವರ್ಷಗಳಿಂದ ಮಳಿಗೆಗಳು ನಿರ್ಮಾಣಗೊಂಡು ಕೃಷಿ ವಹಿವಾಟು ನಡೆಸುತ್ತಿದ್ದು, ಆದರೆ ಪ್ರಾಂಗಣದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಕೃಷಿ ಉತ್ಪನ್ನಗಳು ಒಣಗಿಸಲು ಸಮರ್ಪಕ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕರಿಗೆ ಮುತ್ತಿಗೆ ಹಾಕಿದರು.
ಎಪಿಎಂಸಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಟೆಂಡರ್ ಹಂತದಲ್ಲಿದೆ. ಟೆಂಡರ್ ಕೆರೆದು ಶೀಘ್ರ ಕಾಮಗಾರಿ ಆರಂಭ ಮಾಡಲಾಗುವುದು ಎಂದು ಶಾಸಕ ಹೂಲಗೇರಿ ವರ್ತಕರಿಗೆ ಭರವಸೆ ನೀಡಿದರು.