ಮಾನವಿ ಪುರಸಭೆಯ ನೂತನ ಅಧ್ಯಕ್ಷ ಶ್ರೀಮತಿ ಸುಫಿಯಾ ಬೇಗಂ ಮತ್ತು ಉಪಾಧ್ಯಕ್ಷ ಶ್ರೀ ಸುಕುಮುನಿ ಇಂದು ಅಧಿಕಾರ ಸ್ವೀಕರಿಸಿದರು.
ಪುರಸಭೆಯ ಕಾರ್ಯಾಲಯದಲ್ಲಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದ ನಂತರ ಪುರಸಭೆ ಯ ಸಭಾಂಗಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ಶ್ರೀ ಹಂಪಯ್ಯ ನಾಯಕ್ ಸಾಹುಕಾರ ಮಾತನಾಡಿ ಪುರಸಭೆ ಚುನಾವಣೆಯಲ್ಲಿ ಆಯ್ಕೆ ಯಾಗಿ ಎರಡು ವರ್ಷಗಳ ಕಾಲ ಅಧಿಕಾರವಿಲ್ಲದೆ ಸದಸ್ಯರು ಪರದಾಡುವ ಸ್ಥಿತಿ ಎದುರಾಗಿತ್ತು ಈಗ ಅಧಿಕಾರ ಒದಗಿ ಬಂದಿರುವುದು ಸಂತೋಷದ ವಿಷಯ, ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಎಲ್ಲಾ 27 ಸದಸ್ಯರನ್ನ ನಂಬಿಕೆಗೆ ತೆಗೆದು ಕೊಂಡು ಯಾವುದೇ ತಾರತಮ್ಯ ಮಾಡದೇ ಉತ್ತಮ ಆಡಳಿತ ನಡೆಸಬೇಕೆಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭೆ ಯ ಸದಸ್ಯ ಫರೀದ್ ಉಮರಿ ಮಾತನಾಡಿ ಎಲ್ಲಾ ಸದಸ್ಯರು ಒಗ್ಗಿಗಟ್ಟಾಗಿ ಪುರಸಭೆ ಯನ್ನ ಸರಿ ದಾರಿಯಲ್ಲಿ ಒಯ್ಯುವ ಅಗತ್ಯವಿದೇ ಜೊತೆಗೆ ವಿಶೇಷವಾಗಿ ಪ್ರತಿಯೊಂದು ಮನೆಗೆ ಶುದ್ಧ ಕುಡಿಯುವ ನೀರು ತಲುಪಿಸುವ ಜೊತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಮಾನವಿ ನಗರದ ಅಭಿವೃದ್ಧಿ ಗೆ ಶ್ರಮಿಸೊಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಅಬ್ದುಲ್ ಗಫೂರ ಸಾಬ್, ರಾಜಾ ವಸಂತ ನಾಯಕ, ಮತ್ತು ಪುರಸಭೆ ಮುಖ್ಯ ಅಧಿಕಾರಿ ಜಗದೀಶ್, ಮತ್ತು ಇತರೇ ಪುರಸಭೆ ಸದಸ್ಯರು ಉಪಸ್ಥಿತರಿದ್ದರು.