ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ವತಿಯಿಂದ ಹನುಮಾನ ಮಾಲಾಧಾರಿಗಳ ಬೃಹತ್ ಪಾದಯಾತ್ರೆ
೩-ಮಾನ್ವಿ-೫:
ಮಾನ್ವಿ: ಪಟ್ಟಣದ ವಾಸವಿ ಕಲ್ಯಾಣ ಮಂಟಪದ ಹತ್ತಿರದ ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಸಿಂಧನೂರು ರಸ್ತೆಯ ಶ್ರೀ ಉದ್ಬಾವ ಆಂಜನೇಯಸ್ವಾಮಿ ದೇವಸ್ಥಾನದ ವರೆಗೆ ವಿಶ್ವ ಹಿಂದೂ ಪರಿಷದ್ ಹಾಗೂ ಬಜರಂಗದಳ ತಾ.ಘಟಕ ವತಿಯಿಂದ ಹನುಮಾನ ಮಾಲಾ ಧಾರಿಗಳು ಹಾಗೂ ಶ್ರೀ ಅಯ್ಯಪ್ಪಸ್ವಾಮಿ ಮಾಲಾ ದಾರಿಗಳ ಬೃಹತ್ ಸಂಕೀರ್ತನ ಪಾದಯಾತ್ರೆ ಮೆರವಣಿಗೆಯಲ್ಲಿ ತಾಲೂಕಿನ ಸಾವಿರಾರು ಮಾಲಾ ಧಾರಿಗಳು ಭಾಗವಹಿಸಿದರು.