ಕ್ರೈಸ್ತ ಗುರುಗಳಿಗೆ ಕ್ರಿಸ್ಮಸ್ ಹಬ್ಬದ ಶುಭಾಶಯ ಕೊರಿದ ಕರವೇ ಜನಪರ ಬಣ ಮಾನವಿ

0
332

ಮಾನವಿ : ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ಲೋಯೋಲಾ ಸಂಸ್ಥೆಯಲ್ಲಿ ಕ್ರೈಸ್ತ ಧರ್ಮ ಗುರುಗಳಾದ ಹಿರಿಯರಾದ ಮೇಕ್ಸಿಮ್ ಫಾದರ್ ಹಾಗೂ ಕಿರಿಯ ಫಾದರ್ ಫಾರೇಸ್ಟ ಅವರಿಗೆ ಕರವೇ ಜನಪರ ಬಣ ಸಂಘಟನೆಯ ಕಾರ್ಯಕರ್ತರು ಕೇಕ್ ಕತ್ತರಿಸಿ ಎಲ್ಲಾರಿಗೂ ಸಿಹಿ ಹಂಚಿ ಕ್ರಿಸ್ ಮಸ್ ಹಬ್ಬದ ಶುಭಾಶಯ ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೇಕ್ಸಿಮ್ ಫಾದರ್ ಅವರು ಯೇಸು ಪ್ರಭು ಶಾಂತಿ ಸಹಬಾಳ್ವೆ ಸೌಹಾರ್ದತೆಯನ್ನು ಮತ್ತು ಅಖಂಡ ಭಾರತದ ಕಲ್ಪನೆಯನ್ನು ಸಾಕಾರಗೊಳಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಶ್ರೀಕಾಂತ ಪಾಟೀಲ ಗೂಳಿ ರಾಜ್ಯ ಗೌರವ ಸಲಹೆಗಾರರಾದ ದೊಡ್ಡಣ್ಣ ಹೂಗಾರ ರವರು ಮಾತನಾಡಿ ಶುಭಾಶಯಗಳು ತಿಳಿಸಿದರು.

ರಾಜ್ಯ ಉಪಾಧ್ಯಕ್ಷರಾದ ಇರ್ಫಾನ್ ಧಣಿ ರಾಮಣ್ಣ ನಾಯಕ ಸಿದ್ದಪ್ಪ ನಂದಿಹಾಳ ಶ್ರೀಮತಿ ಪಿ ಲೀಲಾವತಿ ಲಕ್ಷ್ಮಣ ದೀಪಕ್ ಪಟೇಲ್ ಡಾ. ನೂರೂಲ್ಲಾಖಾನ್ ಎಂ.ಡಿ. ಇಮಾಮ್ ಸಾಬ್ ವಿಶ್ವನಾಥ ಪವಾರ ಮಹಾಂತೇಶ ನಾರಬಂಡೆ ಶ್ರೀಮತಿ ರೇಖಾ ಬೇಬಿ ಆಂಜನೇಯ ನಾಯಕ ಬಸವರಾಜ ನಾಯಕ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here