ನಾಗರಿಕ ಸೇವಾ ಕೇಂದ್ರ, ಮೈಕ್ರೊ ಫೈನಾನ್ಸ್, ವನಮಹೊತ್ಸ್ವ, ಪರಿಸರ ಜಾಗೃತಿ, ಮಾದರೀ ಗ್ರಾಮ, ಗಳ ನಿರ್ಮಾಣ ಅತ್ಯಂತ ಶ್ರೇಷಠ ಕೆಲಸ; ಅಕ್ಬರ್ ಅಲಿ ಉಡುಪಿ

0
228

ಮಾನವಿ.ಜ.20- ಸಮಾಜ ಸೇವೆ ಮಾಡುವುದರಲ್ಲಿ ಜಾತಿ ಧರ್ಮ ನೊಡಬಾರದು ಕೇವಲ ಅಲ್ಲಾಹನ ಸಂಪ್ರೀತಿಗಾಗಿ ನಮ್ಮ ಸೇವೆ ಯಾಗಿರಬೇಕು ಪ್ರತಿಯೊಬ್ಬರು ಈ ಕ್ಷೇತ್ರದಲ್ಲಿ ಭಾಗವಹಿಸಿ ಮಾನವೀಯತೆ ಮೆರೆಯಬೇಕು ಇದು ಇಹಲೊಕದ ಅತ್ಯಂತ ಶ್ರೇಷ್ಠವಾದ ಕೆಲಸ ವಾಗಿದೆ ಎಂದು ಅಕ್ಬರ್ ಅಲಿ ಉಡುಪಿ ಹೇಳಿದರು

ಅವರು  ಇಂದು ಮಾನವಿ ನಗರದ ಜಮಾಅತೇ ಇಸ್ಲಾಮಿ ಹಿಂದ್ ನ ಕಾರ್ಯಾಲಯದಲ್ಲಿ ಜಮಾಅತ್ ನ ಸಮಾಜ ಸೇವಾ ಘಟಕದ ವತಿಯಿಂದ ರಾಯಚೂರು,ಬಳ್ಳಾರಿ ವಿಭಾಗದ ಏಕ ದಿನ ಕಾರ್ಯಾಗಾರವನ್ನ  ಉದ್ಪ್ರಾಘಾಟಿಸಿ ಮಾತನಾಡಿದರು

ಅವರು ನಾಗರಿಕ ಸೇವಾ ಕೇಂದ್ರ, ಮೈಕ್ರೊ ಫೈನಾನ್ಸ್, ವನಮಹೊತ್ಸ್ವ, ಮಾದರೀ ಗ್ರಾಮ, ಗಳ ನಿರ್ಮಾಣದಲ್ಲಿ ಅತೀ ಹೆಚ್ಚು ಶ್ರಮಪಡಬೇಕೆಂದು ಕಾರ್ಯಕರ್ತರಿಗೆ ಸಲಹೆ ನೀಡಿದರು

ಈ ಸಂದರ್ಭದಲ್ಲಿ ಜಮಾಅತೇ ಇಸ್ಲಾಮಿ ಹಿಂದ್ ನ ರಾಜ್ಯ ಕಾರ್ಯದರ್ಶಿಗಳಾದ ಅಕ್ಬರ್ ಅಲಿ ಉಡುಪಿ ಮತ್ತು ಎಚ್ ಆರ್ ಎಸ್ ನ ರಾಜ್ಯ ಸಂಚಾಲಕರಾದ ಮೊಹಮ್ಮದ್ ಮರಕಡ ಸಾಬ್ ಮತ್ತು ಚಿಕಿತ್ಸಾ ವಿಭಾಗದ ಸಂಚಾಲಕ ಇರ್ಫಾನ್ ಹಾಗು ಜಮಾತೇ ಇಸ್ಲಾಮಿ ಹಿಂದ್ ನ ವಿಭಾಗೀಯ ಸಂಚಾಲಕ ಮೌಲಾನ ನಜ್ಮುದ್ದೀನ್ ಉಮರಿ, ಜಿಲ್ಲಾ ಸಂಚಾಲಕ ಮೌಲಾನ ಅನ್ವರ್ ಪಾಶ ಉಮರಿ, ಹಾಗು ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಮ್ ಖಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here