ಮಸ್ಕಿ : ಮಸ್ಕಿ ತಾಲೂಕಿನ ಗುಡಗೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಸವರಾಜಸ್ವಾಮಿ ಹಸಮಕಲ್ ಅವರಿಗೆ ಗಡದೂರು ಗ್ರಾ.ಪಂ ಸದಸ್ಯೆ ಸುನಿತಾ ಬಸವರಾಜ ಸನ್ಮಾನಿಸಿದರು.
ತಾಲೂಕಿನ ಗುಡದೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನೂತನವಾಗಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಸವರಾಜಸ್ವಾಮಿ ಹಸಮಕಲ್ ಅವರಿಗೆ ಗುಡದೂರು ಗ್ರಾ.ಪಂ ಸದಸ್ಯೆ ಸುನಿತಾ ಬಸವರಾಜ ಬುಧವಾರ ಸನ್ಮಾನಿಸಿದರು.
ಸಹಕಾರಿ ಸಂಘಕ್ಕೆ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದ ಬಸವರಾಜಸ್ವಾಮಿ ಹಾಗೂ ಚನ್ನಪ್ಪ ಸಾಹುಕಾರ ಆಯ್ಕೆಯಾಗಿದ್ದರು. ಇತ್ತೀಚೆಗೆ ಸಹಕಾರಿ ಸಂಘಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಗೋವಿಂದಪ್ಪ ರಂಗಾಪುರು, ಚಿನ್ನನಗೌಡ ಗೋನಾಳ, ಅಮರೇಶ ದುಗನೂರು ಸೇರಿದಂತೆ ಇನ್ನಿತರರಿದ್ದರು.