ಕಾನೂನು ಅರಿವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನ
ಮಾನ್ವಿ: ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಯಚೂರು ತಾಲೂಕ ಕಾನೂನು ಸೇವಾ ಸಮಿತಿ ಮಾನ್ವಿ,ವಕೀಲರ ಸಂಘ ಮಾನ್ವಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಅರಿವಿನ ಮೂಲಕ ನಾಗರಿಕರ ಸಬಲೀಕರಣ ಅಭಿಯಾನದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಮಾತನಾಡಿ ದೇಶದ ಸಂವಿಧಾನದಲ್ಲಿ ತಿಳಿಸಿದ ಪ್ರತಿಯೊಂದು ಕಾನೂನುಗಳನ್ನು ಗೌರವಿಸುವುದು ಹಾಗೂ ಅವುಗಳನ್ನು ಪಾಲನೆ ಮಾಡುವುದು ಪ್ರತಿಯೊಬ್ಬರ ಅದ್ಯಕರ್ತವ್ಯವಾಗಿದೆ ಆದರಿಂದ ಕನಿಷ್ಟ ದಿನನಿತ್ಯ ಜೀವನದಲ್ಲಿ ಅಗತ್ಯವಿರುವ ಕಾನೂಗಳ ಜ್ಞಾನವನ್ನು ಪಡೆಯುವುದು ಅವಶ್ಯವಿದೆ ಎಂದು ತಿಳಿಸಿದರು.
ಹನುಮಂತ ಬ್ಯಾಗವಾಟ ವಕೀಲರು ಮಾತನಾಡಿ ಹೆಣು ಮಕ್ಕಳಿಗೂ ಶಿಕ್ಷಣದ ಹಕ್ಕನ್ನು ನೀಡಲಾಗಿದ್ದು ಗ್ರಾಮೀಣಭಾಗದಲ್ಲಿ ಹೆಚ್ಚಾಗಿರುವ ಬಾಲ್ಯವಿವಾಹ ,ಬಾಲ ಕಾರ್ಮಿಕ ಪದ್ದತಿ,ಕಾನೂನು ಬಾಹಿರವಾಗಿದೆ ಎಂದು ತಿಳಿಸಿದರು. .
ಯಲ್ಲಪ್ಪ ಹಿರೇಬಾದರದ್ದಿನ್ನಿ ವಕೀಲರು,ವೀರನಗೌಡ ವಕೀಲರು ಮಾತನಾಡಿದರು
ವಕೀಲರ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ್, ಗ್ರಾ.ಪಂ.ಅಧ್ಯಕ್ಷೆ ಬಸಲಿಂಗಮ್ಮ,ಉಪಾಧ್ಯಕ್ಷ ಅಮರೇಶ, ಹಿರಿಯ ವಕೀಲರಾದ ಮನೋಹರ್ ವಿಶ್ವಕರ್ಮ,ಹನುಮಂತ ನಂದಿಹಾಳ ಸೇರಿದಂತೆ ಇನ್ನಿತರರು ಇದ್ದರು.
೧೦-ಮಾನ್ವಿ-೨:
ಮಾನ್ವಿ: ತಾಲೂಕಿನ ಬ್ಯಾಗವಾಟ್ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮಾಜಿ ಶಾಸಕ ಬಸವನಗೌಡ ಬ್ಯಾಗವಾಟ್ ಉದ್ಘಾಟಿಸಿದರು