ಜಿಲ್ಲಾ ಅಧ್ಯಕ್ಷರಾಗಿ ಮೌಲಾನ ಶ್ರೀ ಫರೀದ್ ಉಮರಿ ಪುರಸಭೆ ಸದಸ್ಯರು ಮಾನವಿ ಇವರು ಅವಿರೋಧವಾಗಿ ಆಯ್ಕೆ
ರಾಯಚೂರು, ಇಂದು ದಿನಾಂಕ 20/11/2022 ಮಾನವಿ ನಗರದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಯಚೂರು ಜಿಲ್ಲಾ ಅಧ್ಯಕ್ಷರ ಚುನಾವಣೆ ನಡೆಯಿತು, ಮೇಲ್ವಿಚಾರಕರಾಗಿ ಪಕ್ಷದ ರಾಜ್ಯಅಧ್ಯಕ್ಷರಾದ ಮಾನ್ಯ ಶ್ರೀ ಅಡ್ವೋಕೇಟ್ ತಾಹಿರ್ ಹುಸೇನ್ ಆಗಮಿಸಿದ್ದರು, ಪಕ್ಷದ ಸಂವಿಧಾನ ಮತ್ತು ಪಕ್ಷ ಸಂಘಟನೆ ಕುರಿತು ವಿಚಾರ ವಿನಿಮಯದ ನಂತರ ಜಿಲ್ಲಾ ಸಮಿತಿಗೆ ಚುನಾವಣಾ ಪ್ರಕ್ರಿಯೆ ನಡೆಯಿತು
ಜಿಲ್ಲಾ ಅಧ್ಯಕ್ಷರಾಗಿ ಮೌಲಾನ ಶ್ರೀ ಫರೀದ್ ಉಮರಿ ಪುರಸಭೆ ಸದಸ್ಯರು ಮಾನವಿ ಇವರು ಅವಿರೋಧವಾಗಿ ಆಯ್ಕೆಯಾದರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸೈಯದ್ ಅನ್ಸಾರ್ ಹುಸೇನ್ ರಾಯಚೂರು ಆಯ್ಕೆಯಾದರು , ಇಬ್ಬರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಿಸಲಾಯಿತು ಅಬ್ದುಲ್ ಗನಿ ಗುಂಜಳ್ಳಿ, ಮಹಿಬೂಬ್ ಖಾನ್ ಸಿಂಧನೂರು, ಜಿಲ್ಲಾ ಕಾರ್ಯದರ್ಶಿಗಳಾಗಿ ಎಮ್ ಏ ಏಚ್ ಮುಖೀಮ್ ಮಾನವಿ, ಖಜಾಂಚಿಯಾಗಿ ಫಾರೂಕ್ ಮನಿಯಾರ್ ಇವರನ್ನು ನೇಮಿಸಲಾಯಿತು.
ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರಾದ ಅನ್ವರುಲ್ ಹಸನ್ ರಾಯಚೂರು, ಪಿ ಡಿ ಓ ಮೌಲಾಸಾಬ್ ಸಿಂಧನೂರು, ಶೇಕ್ ಬಾಬಾ ಹುಸೇನ್ ಮಾನವಿ, ಮಹಿಬೂಬ್ ಫ್ರೂಟ್, ಅಬ್ದುಲ್ ಹಮೀದ್, ಮುಸ್ತಫಾ ಏ ಒನ್ ಟೈಲರ್, ಮಿರ್ಜಾ ಬಾಬಾ ಬೇಗ್, ಸೈಯದ್ ಖಾಜಾ ಮೋಹಿನಿದ್ದೀನ್ ಮತ್ತು ಇತರೆ ಕಾರ್ಯಕರ್ತರು ಉಪಸ್ಥಿತರಿದ್ದರು