ಮಾನವಿ; ಏಕಲವ್ಯ ಕರಿಯರ್ ಅಕಾಡೆಮಿಯಲ್ಲಿ ಮಾನ್ವಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜ ವೆಂಕಟಪ್ಪ ನಾಯಕರವರ ಆರ್ಥಿಕ ಸಹಕಾರದೊಂದಿಗೆ ಮೂರು ತಿಂಗಳ ಕಾಲ ನಡೆದ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು ಮುಖ್ಯ ಅತಿಥಿ ಹಾಗೂ ಉದ್ಘಾಟಕರಾಗಿ ಶ್ರೀ ರಾಜ ರಾಮಚಂದ್ರ ನಾಯಕ ದೊರೆಗಳು ಆಗಮಿಸಿದ್ದರು ಅವರುಗಳು ವಿದ್ಯಾರ್ಥಿಗಳೊಡನೆ ಮಾತನಾಡಿ ನಮ್ಮ ನೆಚ್ಚಿನ ಶಾಸಕರು ಸದಾ ನಿಮ್ಮೊಂದಿಗೆ ಸಹಕರಿಸುತ್ತಾರೆ ನೀವು ವಿದ್ಯೆಯಲ್ಲಿ ಉತ್ತಮ ಸ್ಥಾನವನ್ನು ಗಳಿಸಿರಿ ಮುಂದಕ್ಕೆ ಸಾಗಿರಿ ರಾಜಾ ವೆಂಕಟಪ್ಪ ನಾಯಕ ದೊರೆಯವರು ಶಿಕ್ಷಣಕ್ಕಾಗಿ ತನ್ನ ಜೀವನವನ್ನೇ ಮುಡಿಪಿಟಿದ್ದಾರೆ ಈಗಾಗಲೇ ಅದೆಷ್ಟೋ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗಾಗಿ ಅದೆಷ್ಟು ಅನುದಾನಗಳನ್ನು ನೀಡುತ್ತಾರೆ ಎಂದು ಅವರು ಹೇಳಿದರು ಈ ಸಂದರ್ಭದಲ್ಲಿ ಮುಖಂಡರುಗಳಾದ ಮಹಾಲಿಂಗಪ್ಪ ಮಹಾದೇವಪ್ಪ ಮತ್ತು ಗೋಪಾಲ ನಾಯಕ ಉಪಸ್ಥಿತರಿದ್ದರು