ಭೀಮಾತೀರದ ಗುಂಡಿನ ದಾಳಿ ಪ್ರಕರಣ. ಇಬ್ಬರು ಆರೋಪಿಗಳ ಬಂಧನ.

0
256

ಭೀಮಾತೀರದ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಇಬ್ಬರು ಆರೋಪಗಳನ್ನು ವಿಜಯಪುರ ಪೊಲಿಸರು ಬಂಧಿಸಿದ್ದಾರೆ. ಉಮರಾಣಿ ಗ್ರಾಮದ ನಾಗಪ್ಪ ಪೀರಗೊಂಡ ಹಾಗೂ ಮತ್ತೋರ್ವ ವಿಜಯಪುರ ನಿವಾಸಿ ವಿಜಯ ತಾಳಿಕೋಟ ಬಂಧಿತ ಆರೋಪಿಗಳು. ನಾಗಪ್ಪ ಅಂದು ಮಹಾದೇವ ಸಾಹುಕಾರ ಕಾರ್​ಗೆ ಟಿಪ್ಪರ್​ದಿಂದ ಡಿಕ್ಕಿ ಹೊಡೆಸಿದರೆ, ವಿಜಯ ಮಹಾದೇವ ಸಾಹುಕಾರನ ಬಗ್ಗೆ ಮಾಹಿತಿ ನೀಡಿದ್ದನಂತೆ.

ಇನ್ನು, ಹಳೆಯ ದ್ವೇಷ ಹಾಗೂ ಯಾವುದೇ ಗ್ಯಾಂಗ್ ಪ್ರಬಲ ಇಲ್ಲದ ಕಾರಣ ಯುವಕರು ಗ್ಯಾಂಗ್ ಕಟ್ಟಲು ಗುಂಡಿನ ದಾಳಿ ಮಾಡಿದ್ದಾರೆ. ಮಡಿವಾಳ ಹಿರೇಮಠ ಸ್ವಾಮಿ ಎಂಬಾತನಿಂದ ಕೃತ್ಯ ನಡೆದಿದ್ದು, ತಾನೇ ಒಂದು ದೊಡ್ಡ ಗ್ಯಾಂಗ್ ಕಟ್ಟಿಕೊಳ್ಳಲು ಗುಂಡಿನ ದಾಳಿ ನಡೆಸಿದ್ದನೆಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಹೇಳಿದ್ದಾರೆ.

ಇನ್ನು, ಹಳೆಯ ದ್ವೇಷ ಹಾಗೂ ಯಾವುದೇ ಗ್ಯಾಂಗ್ ಪ್ರಬಲ ಇಲ್ಲದ ಕಾರಣ ಯುವಕರು ಗ್ಯಾಂಗ್ ಕಟ್ಟಲು ಗುಂಡಿನ ದಾಳಿ ಮಾಡಿದ್ದಾರೆ. ಮಡಿವಾಳ ಹಿರೇಮಠ ಸ್ವಾಮಿ ಎಂಬಾತನಿಂದ ಕೃತ್ಯ ನಡೆದಿದ್ದು, ತಾನೇ ಒಂದು ದೊಡ್ಡ ಗ್ಯಾಂಗ್ ಕಟ್ಟಿಕೊಳ್ಳಲು ಗುಂಡಿನ ದಾಳಿ ನಡೆಸಿದ್ದನೆಂದು ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ ಹೇಳಿದ್ದಾರೆ.

LEAVE A REPLY

Please enter your comment!
Please enter your name here