ಮೂಢ ನಂಬಿಕೆ  ವಿರುದ್ಧ  ಧ್ವನಿಎತ್ತಿದ  ಮಡಿವಾಳ ಮಾಚದೇವರು -ತಿಮ್ಮಾರೆಡ್ಡಿ ಭೋಗಾವತಿ 

0
280
ಮಾನ್ವಿ.ಫೆ,01-  12ನೇಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತಿಯತೆ, ಮೇಲು-ಕೀಳು, ತಾರತಮ್ಯ, ಅಸ್ಪ್ರುಶ್ಯತೆ, ಮೂಢ ನಂಬಿಕೆಗಳ ವಿರುದ್ಧ ಧ್ವನಿ ಏತ್ತಿದವರಲ್ಲಿ ಮಡಿವಾಳ ಮಾಚಿದೇವರು ಕೂಡಾ ಪ್ರಮುಖರು ಎಂದು ಟಎಪಿಎಂಸಿ ಅಧ್ಯಕ್ಷ ತಿಮ್ಮಾರಡ್ಡಿಗೌಡ ಭೋಗಾವತಿ  ಹೇಳಿದರು.
ಪಟ್ಟಣದ ರೈತ ಭವನದಲ್ಲಿ   ತಾಲೂಕಾಡಳಿತ  ವತಿಯಿಂದ ಆಯೋಜಿಸಿದ್ದ   ಮಡಿವಾಳ ಮಾಚಿದೇವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು
ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದ ಬಡವರು, ದೀನದಲಿತರು, ಮಹಿಳೆಯರು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು-ಸಮಬಾಳು ಒದಗಿಸಲು ಬಸವ ಮಾಚಿದೇವ ಅತ್ಯಂತ ಪ್ರಕಾಶಮಯವಾಗಿ ಕಂಡುಬಂದರು. ಆದರ್ಶ ಗುಣಗಳನ್ನು ಪರಿಪಾಲಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
 ಮಡಿವಾಳ  ಅವರು ಮಾಚಯ್ಯ ಹುಟ್ಟಿದಾಗಿನಿಂದಲೂ ಮಡಿವಾಳನಾಗಿದ್ದು, ಅಚಲ ಕಾಯಕ ನಿಷ್ಠನಾಗಿದ್ದ. ಹಿಮಾಲಯದಷ್ಟು ಧೃಡನಾಗಿದ್ದ. ತನ್ನ ಕಾಯಕವೇ ಭಕ್ತಿ, ಜೀವನದುಸಿರು ಎಂದು ನಂಬಿದ್ದ. ಮಾಚಿದೇವರು 12 ನೇ ಶತಮಾನದಲ್ಲಿ ಕ್ರಾಂತಿ ಮಾಡುವುದರೊಂದಿಗೆ ಹಿಂದೂಳಿದ ಸಮಾಜಕ್ಕೆ ಗೌರವ ನೀಡುವ ಮನೋಭಾವನೆ ಬೆಳೆಸಿದರು.
ಸಮಾಜ  ಅತಿ ಹಿಂದುಳಿದ ಸಮಾಜವಾಗಿದೆ. ಸಮಾಜದವರು ಜಾಗೃತರಾಗಬೇಕು. ಸಮಾಜದಲ್ಲಿ ಸಾಧನೆಗೈದ ಮುಖಂಡರು ಹಲವರು ಇದ್ದಾರೆ ಅವರನ್ನು ಗುರುತಿಸುವ ಪ್ರಯತ್ನವಾಗಬೇಕಿದೆ ಎಂದರು. ಅಲ್ಲದೆ ಮಡಿವಾಳ ಸಮಾಜವನ್ನು ರಾಜಕೀಯ ಸಮಾಜಕವಾಗಿ ಬಲಿಷ್ಟವಾಗಿ ಬೆಳಯಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಉಪನ್ಯಾಸ ನೀಡಿದ ಗೋಪಾಲ ನಾಯಕ ಶಿಕ್ಷಕ  ಮಡಿವಾಳ ಮಾಚಿದೇವರು ಅವರ ತತ್ವಗಳನ್ನು ಮೌಲ್ಯಾಧಾರಿತ ವಿಚಾರಗಳನ್ನು ಅಳವಡಿಸಿಕೊಳ್ಳಲು ಯುವಕರು ಜಾಗೃತಗೊಳಿಬೇಕು ಎಂದು ಹೇಳಿದರು. ಪ್ರೀತಿ ಪ್ರೇಮ ತತ್ವ ಸಾಹಿತ್ಯದ ವಿಚಾರಧಾರೆಗಳನ್ನು ಪಾಲನೆ ಮಾಡಬೇಕು ಎಂದು ಹೇಳಿದರು
ಸಮಾಜದಲ್ಲಿ ಸಮಾನತೆಯನ್ನು ಕಾಣಬೇಕು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಅವರ ವಚನಗಳನ್ನ ಆಳವಡಿಸಿಕೂಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾ ಪ.ಅಧ್ಯಕ್ಷ ಚನ್ನಬಸವಗೌಡ ಬೆಟ್ಟದೂರು. ಅಧ್ಯಕ್ಷ ಪ್ರಾ.ಸ.ಕೃ.ಬ್ಯಾಂಕ್ ಶಿವಶಂಕರ ಗೌಡ.ತಹಸೀಲ್ದಾರರ ಅಮರೇಶ ಬಿರಾದಾರ್. ಪುರಸಭೆ ಮುಖ್ಯಾಧಿಕಾರಿ ವಿಜಯಲಕ್ಷ್ಮೀ. ವಾಲಿಬಾಬು.ಮಡಿವಾಳ ಸಮಾಜದ ಸಂಘದ ಅಧ್ಯಕ್ಷ ರಮೇಶ್. ಹುಲಿಗಪ್ಪ ಹರವಿ. ಶರಣಬಸವ.ಯಲಪ್ಪ. ಈರಣ್ಣ. ಅಶೋಕ್. ಹನಮೇಶ. ಇನ್ನಿತರ ಉಪಸ್ಧಿತಿರ ಇದ್ದರು.

LEAVE A REPLY

Please enter your comment!
Please enter your name here