ಜನಸೇವಾ ಫೌಂಡೇಶನ್ ಮಾನ್ವಿ ಹಾಗೂ ಬೊಮ್ಮನಹಳ್ಳಿ ಬಾಬು ಅಭಿಮಾನಿಗಳು ಬಳಗದಿಂದ ಹಣ್ಣು ಹಂಪಲು ವಿತರಣೆ..
ಮಾನವಿ :- ರಾಯಚೂರು ಜಿಲ್ಲೆಯ ಜನಸೇವಾ ಫೌಂಡೇಶನ್ ಮಾನ್ವಿ ಹಾಗೂ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಅಭಿಮಾನಿಗಳು ಸಂಘದಿಂದ ಸರ್ಕಾರಿ ಆಸ್ಪತ್ರೆಯ ಚಿಕಿತ್ಸೆ ಪಡೆಯುತ್ತಿರುವ ಹಾಗೂ ಗರ್ಭಿಣಿ ಮತ್ತು ಹೆರಿಗೆಯಾದ ಮಹಿಳೆಯರಿಗೆ ಮಾನವಿ ತಾಲೂಕಿನಲ್ಲಿ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಅಧ್ಯಕ್ಷರಾದ ಅಜ್ಮತ್ ಖಾನ್ ಹಾಗೂ ಕಾರ್ಯದರ್ಶಿ ಚಂದ್ರಶೇಖರ ಮದ್ಲಾಪೂರ ಇವರು ಹಣ್ಣು ಹಂಪಲು ವಿತರಣೆ ಮಾಡಿದರು.
ತಾಲೂಕ ಸರ್ಕಾರಿ ಆಸ್ಪತ್ರೆಯಲ್ಲಿ ಇಂದು ಜನಸೇವಾ ಫೌಂಡೇಶನ್ ಹಾಗೂ ಡಾ ಬೊಮ್ಮನಹಳ್ಳಿ ಬಾಬು ಅವರ ಬಳಗದಿಂದ ಛತ್ರಪತಿ ಶಿವಾಜಿ ಅವರ ಹಾಗೂ ಸವಿತಾ ಮಹರ್ಷಿಯವರ ಜಯಂತಿ ಮತ್ತು ಭಾನುವಾರ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ನಡೆಯುವ 09 ನೇ ತಾಲೂಕ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಇಂದು ಆಸ್ಪತ್ರೆಯಲ್ಲಿ ಒಳರೋಗಿಗಳಿಗೆ ಹಾಗೂ ಗರ್ಭಿಣಿ ಮತ್ತು ಹೆರಿಗೆಯಾದ ಮಹಿಳೆಯರಿಗೆ ಉಚಿತವಾಗಿ ಹಣ್ಣು ಬ್ರೆಡ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಬಾಬಾ ಛಾಯಾಗ್ರಹಕ. ಫ್ರೂಟ್ ಸುಬಾನಿ. ಕೆ ಶಿವಕುಮಾರ್. ಭಾಷ ಟೈಲ್ಸ್. ರಾಜ ಪಿ ಒ ಪಿ. ಶಬ್ಬೀರ್. ಮೋಹಿದ್ ಖುರೇಷಿ. ಹಕ್ಕು ಜನಸೇವಕ .ಸದ್ದಾಂ. ಮಹಮ್ಮದ್. ಅಸ್ಲಾಂ.ವಾಹೀದ್. ಅಸ್ಲಾಂ ಪಂಚ್ಚರ. ಸರ್ಕಾರಿ ಆಸ್ಪತ್ರೆಯ ವೈಧ್ಯ ಅಧಿಕಾರಿಗಳು ರಾಮು ಹೊಳೆಯಪ್ಪನರು. ರವಿ ಸೇರಿದಂತೆ ಅನೇಕ ಸಿಬ್ಬಂದಿಗಳು ಉಪಸ್ಥಿತರಿದ್ದರು.