ಶ್ರೀ ನಾರಾಯಣತೀರ್ಥ ಆಶ್ರಮದಲ್ಲಿ ರಥೋತ್ಸವ
ಮಾನ್ವಿ: ಪಟ್ಟಣದ ಶ್ರೀ ನಾರಾಯಣತೀರ್ಥ ಆಶ್ರಮದಲ್ಲಿ ಶ್ರೀ ಕೂಡ್ಲಿ ಆರ್ಯ ಅಕ್ಷೆÆÃಭ್ಯ ತೀರ್ಥ ಮಠಾಧೀಶರಾದ ಶ್ರೀ ನಾರಾಯಣ ತೀರ್ಥ ಶ್ರೀ ಪಾದಂಗಳವರ ೪೯ನೇ ಆರಾಧನಾ ಮಹೋತ್ಸವದ ಉತ್ತರರಾಧನೆ ಅಂಗವಾಗಿ ಶ್ರೀ ನಾರಾಯಣ ತೀರ್ಥ ಶ್ರೀ ಪಾದಂಗಳವರ ವೃಂದಾವನಕ್ಕೆ ಅಭಿಷೇಕ,ವಿಶೇಷವಾದ ಹೂವಿನ ಅಲಂಕಾರ ಬೆಳಿಗ್ಗೆ ಆಶ್ರಮದಲ್ಲಿ ಸ್ವಯಂ ವ್ಯಕ್ತ ವಾಯುದೇವರಿಗೆ ವಾಯುಸ್ತುತಿ ಪುನಶ್ಚರಣ, ಸಾಮೂಹಿಕ ಭಜನೆ, ,ಪಲ್ಲಕ್ಕಿ ಸೇವೆ ನಡೆಯಿತು
ಶಾಸಕ ರಾಜಾ ವೆಂಕಟಪ್ಪನಾಯಕ ರಥೋತ್ಸವಕ್ಕೆ ಚಾಲನೆ ನೀಡಿದರು.
ನಂತರ ಪಲ್ಲಕ್ಕಿ ಸೇವೆ, ವಿವಿಧ ಭಜನ ಮಂಡಳಿಗಳವರು ದಾಸರ ಹಾಗೂ ಭಕ್ತಿಗಳನ್ನು ಹಾಡುತ್ತ,. ಮಹಿಳೆಯರ ಕೋಲಾಟದೊಂದಿಗೆ ರಥೋತ್ಸವ ನಡೆಯಿತು.
ನಂತರ ಪಂಡಿತರಿಂದ ಉಪನ್ಯಾಸ ನಡೆಯಿತು ಲೋಕಕಲ್ಯಾಣಾರ್ಥವಾಗಿ ಪವಮಾನ ಹೋಮ ಸೇರಿದಂತೆ ಇತರೆ ಧಾರ್ಮಿಕ ಕಾರ್ಯಕ್ರಮಗಳು ನಡೆದವು,
ವ್ಯವಸ್ಥಾಪಕರಾದ ಅರ್.ಎಸ್.ಕೃಷ್ಣಮೂರ್ತಿ ಹಾಗೂ ಶ್ರೀಧರಮೂರ್ತಿ,ಪುರಸಭೆ ಸದಸ್ಯ ಶರಣಪ್ಪ ಮೇದಾ,ಮಲ್ಲಿಕಾರ್ಜುನಗೌಡ ಬಲ್ಲಟಗಿ, ಸೇರಿದಂತೆ ತಾಲ್ಲೂಕಿನ ವಿಪ್ರ ಭಾಂದವರು ಶ್ರೀ ಮಠದ ಭಕ್ತರು ಇದ್ದರು
ಮಾನ್ವಿ: ಪಟ್ಟಣದ ಶ್ರೀ ನಾರಾಯಣತೀರ್ಥ ಆಶ್ರಮದಲ್ಲಿ ರಥೋತ್ಸವ ನೆರವೇರಿಸಲಾಯಿತು