ಮಾನ್ವಿ: ಪಟ್ಟಣದಲ್ಲಿ ಆಸ್ಪತ್ರೆಗಳಿಗೆ ಮತ್ತು ಪ್ರಯೋಗಾಲಯಗಳಿಗೆ ವಿನಾಕಾರಣ ತೊಂದರೆ ಕೊಡುತ್ತಿರುವ ಜನರಿಗೆ ಎಡೆಮುರಿ ಕಟ್ಟಬೇಕೆಂದು ಆಗ್ರಹಿಸಿ ವೈದ್ಯರಿಂದ ಪ್ರತಿಭಟನೆ ನಡಯಿತು.
ಪಟ್ಟಣದ ತಹಸೀಲ್ದಾರ್ ಕಛೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ಮೆಡಿಕಲ್ ಲ್ಯಾಬ್ ಟೆಕ್ನಾಲೋಜಿಸ್ಟ್ ಅಸೋಸಿಯೇಷನ್ ತಾಲ್ಲೂಕು ಘಟಕ ವತಿಯಿಂದ ಪ್ರಯೋಗಾಲಯಕ್ಕೆ ಹಾನಿ ಮಾಡುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಕ್ಷಣೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ತಹಸೀಲ್ದಾರ್ ಅಬ್ದುಲ್ ವಾಹೀದ್ ರವರ ಮೂಲಕ ಮನವಿ ಸಲ್ಲಿಸಿ ಡಾ.ಶರಣಪ್ಪ ಬಲ್ಲಟಗಿ ಮಾತನಾಡಿದ ಅವರು ರೋಗಿಗಳ ಚಿಕಿತ್ಸೆ ವೇಳೆ ರೋಗ ನಿರ್ಧಾರಕ್ಕೆ ಮಹತ್ವ ಇದ್ದು ಕೆಲವರು ದುರುದ್ದೇಶ ದಿಂದ ವಿನಾಕಾರಣ ಪ್ರಯೋಗಾಲಯಗಳ ಮಾಲೀಕರಿಗೆ ಹಾಗೂ ವೈದ್ಯರಿಗೆ ಕಿರುಕುಳ ನೀಡುತ್ತಿದ್ದು ಕಾರಣ ಕಿರುಕುಳ ನೀಡುತ್ತಿರುವವರ ಮೇಲೆ ಕ್ರಮ ಜರುಗಿಸಿ ಪ್ರಯೊಗಾಲಯ ಮತ್ತು ಆಸ್ಪತ್ರೆಗಳಿಗೆ ರಕ್ಷಣೆ ನೀಡ ಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಡಾ.ಬಸವ ಪ್ರಭು ಪಾಟೀಲ್ ಬೆಟ್ಟದೂರು, ಡಾ.ಪ್ರಜ್ಞಾ ಹರಿ ಪ್ರಸಾದ , ಡಾ,ಅಸೀಫ್, ತಾ.ಅಧ್ಯಕ್ಷ ದೇವೇಂದ್ರ ದುರ್ಗದ, ಅಮರೇಶ, ಅರವಿಂದ, ಕಾಸೀಮ್ಸಾಬ್ ,ಮೌನೇಶ, ಅಜೀಜ್, ಶೋಭಾವತಿ, ಪ್ರಕಾಶ್,ಸೇರಿದಂತೆ ಇನ್ನಿತರರು ಇದ್ದರು