ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಕೊರೊನ್ ಸೊಂಕು ಮತ್ತು ಬೆಲೆ ಏರಿಕೆಗೆ ಜನರು ಕಂಗಾಲಾಗಿ ಪರದಾಡುತ್ತಿದ್ದ ಸಂಧಭ೯ದಲ್ಲಿ ಜನರನ್ನು ಕಷ್ಟದಿಂದ ಪಾರು ಮಾಡುವ ಬದಲು ಸರಕಾರದ ಜವಾಬ್ದಾರಿಯುತ ಸ್ಥಾನ ದಲ್ಲಿರುವ ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಒಬ್ಬ ಮಹಿಳೆಗೆ KPTCL ನಲ್ಲಿ ಹುದ್ದೆ ಕೊಡಿಸುತ್ತೆನೆಂದು ಆಮಿಷ ಹೊಡಿ ಅಮಾಯಕ ಮಹಿಳೆಗೆ ತನ್ನ ಕಾಮದಾಹ ತಿರಿಸಿಕೊಳ್ಳಲು ತನ್ನ ಹುದ್ದೆಯ ದುರುಪಯೋಗ ಮಾಡಿರುವ ಈ ನೀಚ ಕೆಲಸದಿಂದ ನಿಜಕ್ಕೂ ನಾಡಿನ ಜನರು ಮತ್ತು ಸರಕಾರಕ್ಕೆ ತಲೆತಗ್ಗಿಸುವಂತಾಗಿದೆಯಂದು ವೆಲ್ಫೇರ್ ಪಾರ್ಟಿ ರಾಜ್ಯ ಅಧ್ಯಕ್ಷ ಅಡ್ವೋಕೇಟ್ ತಾಹೇರ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದರು.
ಮಹಿಳೆಯರ ರಕ್ಷಣೆ ರಾಜ್ಯದಲ್ಲಿ ಕ್ಷೀಣಿಸುತ್ತಿದೆ.ಜವಾಬ್ದಾರಿತ ಸ್ಥಾನದಲ್ಲಿ ಇದ್ದು ಮಹಿಳೆಯರ ಮಾನ ಕಾಪಾಡುವ ಬದಲು, ಮಾನ ಹರಾಜು ಮಾಡಿ ಮುಗ್ದ ಜನರ ಅಸಹಾಯಕತೆಯ ಲಾಭ ಪಡೆಯುತ್ತಿರುವ ಇಂತಹ ನೀಚರನ್ನು,ಜನ ಪಾಠ ಕಲಿಸಬೇಕು ಮತ್ತು ರಾಜಕೀಯ ದಿಂದ ದೂರ ಓಡಿಸಬೇಕು ಯಂದು ಅವರು ಕರೆ ಕೊಟ್ಟರು.
ಒಬ್ಬ ಬಿಜೆಪಿ ಶಾಸಕ ಮತ್ತು ಸಚಿವನಾದ ರಮೇಶ ಜಾರಕಿಹೊಳಿಯ ಇಂತಹ ಹೇಯ್ಯ ಕೃತ್ಯದಿಂದ ಸಜ್ಜನ ಸಮಾಜ ತಲೆ ತಗ್ಗಿಸುವಂತಾಗಿದೆ. ಕೂಡಲೇ ಸರಕಾರ ಇವರಿಗೆ ಶಾಸಕ ಮತ್ತು ಸಚಿವ ಸ್ಥಾನದಿಂದ ಕಿತ್ತೆಸೆದು ರಾಜ್ಯದ ಮಾನ ಕಾಪಾಡಬೇಕಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರು ಕಳಿಸುವಲ್ಲಿ ಯಾವದೇ ಅನುಮಾನವಿಲ್ಲ.
ಸರಕಾರ ಈ ಘಟನೆ ಯ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಮತ್ತು ನೊಂದ ಮಹಿಳೆಗೆ ನ್ಯಾಯ ಕೊಡಿಸಬೇಕು ಯಂದು ವೆಲ್ಫೇರ್ ಪಕ್ಷ ಅಗ್ರಹಿಸಿದೆ