ಬೆಂಕಿ ರಹಿತ ಅಡುಗೆ ತಯಾರಿ ಹಾಗೂ ಮಾರಾಟ ಸ್ಪರ್ಧೆ
ಮಾನ್ವಿ: ಪಟ್ಟಣದ ಶ್ರೀ ಉಮಾಪತಿ ಪಾಟೀಲ್ ಹೈಯರ್ ಪ್ರೆöÊಮಿಯರ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ನಡೆದ ಬೆಂಕಿ ರಹಿತ ಅಡುಗೆ ತಯಾರಿ ಹಾಗೂ ಮಾರಾಟ ಸ್ಪರ್ಧೆಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಸಿಕಾಲ ಪಾಟೀಲ್ ಚಾಲನೆ ನೀಡಿ ಮಾತನಾಡಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣದ ಜೊತೆಗೆ ಸಾಮಾನ್ಯ ಜ್ಞಾನ ಹಾಗೂ ವ್ಯವಹಾರ ಕೌಶಲ್ಯಗಳು ಕೂಡ ಅಗತ್ಯವಿರುವುದರಿಂದ ಮಕ್ಕಳಿಗೆ ಪ್ರಯೋಗಿಕವಾಗಿ ಬೆಂಕಿ ರಹಿತ ಅಡುಗೆ ತಯಾರಿ ಹಾಗೂ ಮಾರಾಟ ಸ್ಪರ್ಧೆಯನ್ನು ಅಯೋಜಿಸಲಾಗಿದು ವಿದ್ಯಾರ್ಥಿಗಳು ತಂಡವಾಗಿ ಕೂಡಿಕೊಂಡು ೪೬ಕ್ಕೆ ಹೆಚ್ಚು ವಿವಿಧ ತಿಂಡಿ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಈ ಸ್ಪರ್ಧೆಯಲ್ಲಿ ಕ್ರೀಯಾಶಿಲವಾಗಿ ಭಾಗವಹಿಸಿದರೆ ಎಂದು ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು ಶಾಲೆಯ ಸಭಾಂಗಣದಲ್ಲಿ ಮಂಡಕ್ಕಿ, ಹಣ್ಣುಗಳ ಮಾರಾಟ, ಬೆಲೆಪೂರಿ,ವಿವಿಧ ನಮೂನೆಯ ಚಾಟ್ಸ್ ಗಳನ್ನು ಪಾನಿಪುರಿ, ಪಾನ್ ಶಾಪ್, ಜ್ಯೂಸ್, ಮಜ್ಜಿಗೆ, ತಂಪು ಪಾನಿಯಗಳು, ಸೋಡ, ಸೇರಿದಂತೆ ವಿವಿಧ ಪಾದರ್ಥಗಳನ್ನು ತಯಾರಿಸಿ ಮಾರಾಟ ಮಾಡಿದರು.
ಮಕ್ಕಳ ಮಾರಾಟ ಕೇಂದ್ರಕ್ಕೆ ಪಾಲಕರೆ ಪ್ರಮುಖ ಗ್ರಾಹಕರಾಗಿದ್ದು ಮಕ್ಕಳು ಪಾಲಕರ ಮನವೋಲಿಸಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ ತಮ್ಮ ಮಕ್ಕಳ ಕೌಶಲ್ಯ ಹಾಗೂ ಉತ್ಸಾಹವನ್ನು ಕಂಡು ಪಾಲಕರು ಖುಷಿಪಟ್ಟರು.
೨೨-ಮಾನ್ವಿ-೨:
ಮಾನ್ವಿ: ಪಟ್ಟಣದ ಶ್ರೀ ಉಮಾಪತಿ ಪಾಟೀಲ್ ಹೈಯರ್ ಪ್ರೆöÊಮಿಯರ್ ಸ್ಕೂಲ್ ನಲ್ಲಿ ನಡೆದ ಬೆಂಕಿ ರಹಿತ ಅಡುಗೆ ತಯಾರಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ತಾವು ತಯಾರಿಸಿದ ತಿನಿಸುಗಳನ್ನು ಮಾರಾಟ ಮಾಡಿದರು.