ಮಾನವಿ, ನ. 11- ನಗರದ ಜ್ಞಾನ ಜ್ಯೋತಿ ಶಾಲೆಯಲ್ಲಿ ಮಾನವಿ ತಾಲೂಕ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ ವತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ಸನ್್ಮ್್ಮಾ್ಮಮಾನ
ಹತ್ತನೇ ತರಗತಿಯಲ್ಲಿ ರಾಜ್ಯ ಮಟ್ಟಕ್ಕೆ ನಾಲ್ಕನೇಯ ರ್ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಅಮಾನುಲ್ಲಾ ತಂದೆ ಯದುಲ್ಲಾ ಹುಸೇನಿ ಮತ್ವಾಲೆ ರವರಿಗೆ ಮಾನವಿ ತಾಲೂಕಿನ ಖಾಸಗಿ ಶಾಲೆಗಳ ಒಕ್ಕೂಟ ದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಒಕ್ಕೂಟ ದ ಅಧ್ಯಕ್ಷ ಶರ್ಫುದ್ದೀನ್ ಪೊತ್ನಾಳ, ಕಾರ್ಯದರ್ಶಿ ರಾಜು ತಾಳಿ ಕೊಟಿ. ಹಾಗೂ ಪದಾಧಿಕಾರಿಗಳಾದ ಬಿವಿ ರೆಡ್ಡಿ, ಶೇಕ್ ಫರೀದ್ ಉಮರಿ, ಏಮ್ ಎಂದು ಎಚ್ ಮುಖೀಮ್, ಭೀಮರಾಯ, ಆಂಜನೇಯ ದಡಿ, ಅಲಿಮ್ ಖಾನ್, ಹಾರೂನ್, ಮಹಮ್ಮದ್ ರಪೀ, ಶರಣ ಬಸವ, ಕುಮಾರಿ ಅಂಬಿಕಾ, ಅಖಿಲೇಶ್ ಕುರುಡಿ. ಮತ್ತು ಇತರೇ ಸದಸ್ಯರು ಉಪಸ್ಥಿತರಿದ್ದರು.