ನ.೧೧ರಂದು ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದಪೂರ್ವಭಾವಿ ಸಭೆ
ಮಾನ್ವಿ: ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾ.ಘಟಕ ವತಿಯಿಂದ ಡಿ.೪ರಂದು ನಡೆಯುವ ಪ್ರಥಮ ತಾಲೂಕು ಮಟ್ಟದ ಮಹಿಳಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಶಾಸಕ ರಾಜಾ ವೆಂಕಟಪ್ಪ ನಾಯಕರವರ ಅಧ್ಯಕ್ಷತೆಯಲ್ಲಿ ನ.೧೧ರಂದು ಮಧ್ಯಾಹ್ನ ೨ಗಂಟೆಗೆ ಶಾಸಕರ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸರ್ವ ಸದಸ್ಯರ ,ಸಾಹಿತಿಗಳ,ಕನ್ನಡ ಪರ ಸಂಘಟನೆಗಳ, ಸಾರ್ವಜನಿಕರನ್ನುಳಗೊಂಡತೆ ಪೂರ್ವಭಾವಿ ಸಭೆಯನ್ನು ಕರೆಯಾಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಸಕ್ತರು ಭಾಗವಹಿಸುವಂತೆ ಕ.ಸಾ.ಪ.ತಾ.ಅಧ್ಯಕ್ಷ ರವಿಕುಮಾರ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.