ಮಾನವಿ: ಪ್ರವಾದಿ ಮೊಹಮ್ಮದ್ (ಸ) ಅತ್ಯುತ್ತಮ ಮಾದರಿ ಸೀರತ್ ಅಭಿಯಾನದ ಪ್ರಯುಕ್ತ ಜಮಾತೆ ಇಸ್ಲಾಮಿ ಹಿಂದ್ ಮಾನವಿ ಸ್ವಚ್ಚತಾ ಕಾರ್ಯಕ್ರಮ ಜರುಗಿತು,
ಜಮಾತ್ ನ ಎಲ್ಲಾ ಮಹಿಳಾ ಮತ್ತು ಪುರುಷ ಸದಸ್ಯರು ನಗರದ ಖುಬಾ ಮಸೀದಿಯಿಂದ ಸಾರ್ವಜನಿಕ ಬಸ್ ನಿಲ್ದಾಣದವರೆಗೆ ರಹದಾರಿಯನ್ನು ಮತ್ತು ಬಸ್ ನಿಲ್ದಾಣದ ಆವರಣದಲ್ಲಿ ಸ್ವಚ್ಚತಾ ಕಾರ್ಯಕ್ರಮ ಮಾಡಲಾಯಿತು ನಂತರ ಅಂತಿಮದಲ್ಲಿ ಮುಖ್ಯ ಅತಿಥಿಗಳಾಗಿ ಬಂದ ಶ್ರೀಮತಿ ಡಾ! ರೋಹಿಣಿ ಜಗನ್ನಾತ್ ಸ್ವಚ್ಚತೆಯ ಮಹತ್ವದ ಕುರಿತು ಮಾತನಾಡಿದರು, ಸಮಾರೋಪ ಭಾಷಣ ಪುರಸಭೆಯ ಸದಸ್ಯ ಫರೀದ್ ಉಮರಿ ಮಾತನಾಡಿ ಪ್ರವಾದಿಗಳ ಮೂಲ ಸಂದೇಶವನ್ನು ತಿಳಿಸಿದರು ಕುಮಾರಿ ನಾಜಿಯಾ ಜಿಐಓ ಹಾಗೂ ಪುರಸಭೆ ಆರೋಗ್ಯ ಅಧಿಕಾರಿ ಕುಮಾರಿ ಝಕೀಯ ಮೆಹೆರುನ್ನಿಸಾ ಮಾತನಾಡಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿದರು. ಕರೀಮ್ ಖಾನ್ ಸಾಬ್ ಸ್ವಾಗತಿಸಿದರು, ಗುಲಾಮ್ ರಸೂಲ್ ಕುರಾನ್ ಸೂಕ್ತ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಎಂ ಏ ಎಚ್ ಮುಖೀಮ್ ಪ್ರಾಸ್ತಾವಿಕವಾಗಿ ಮಾತನಾಡಿದರೆ ಬಾಬಾ ಹುಸೇನ್ ನಿರೂಪಿಸಿದರು ಸಬ್ಜಲಿ ಸಾಬ್ ಧನ್ಯವಾದಗಳು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿಲಾನಿ ಖುರೇಶಿ, ದಾವೂದ್ ಸಿದ್ದೀಖಿ, ಅಬ್ದುಲ್ ರಹಿಮಾನ್, ಸೈಯದ್ ಸಾಬ್, ಗಫೂರ್ ಸಾಬ್ ಫ್ರೂಟ್ ಮತ್ತು SIO, GIO, JIHJIH ಸದಸ್ಯರು ಪದಾಧಿಕಾರಿಗಳು ಉಪಸ್ಥಿತರಿದ್ದರು.