ಫೆ.21ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಸಮ್ಮೇಳನ

ಸನ್ಮಾನ್ಯ ರಾಜಾ ವೆಂಕಟಪ್ಪ ನಾಯಕ ಶಾಸಕರು ಮಾನವಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಸಮ್ಮೇಳನ ದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ

0
190

ಮಾನವಿ,ದಿನಾಂಕ 21/2/2021 ರಂದು ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಸಮ್ಮೇಳನ ಸರಳವಾಗಿ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕ ಅಧ್ಯಕ್ಷ ಮುಜೀಬ್ ಹೇಳಿದರು.

ಅವರಿಂದು ಪತ್ರಿಕಾ ಭವನದಲ್ಲಿ ಪತ್ರಕರ್ತರೊದಿಗೆ ಮಾತನಾಡುತ್ತಾ ದಿನಾಂಕ 21/2/2021ರಂದು ಮಾನವಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಸಮ್ಮೇಳನ ವನ್ನು ಸರಳವಾಗಿ ಆಚರಿಸಲಾಗುವುದು ಈ ಒಂದು ಸಮ್ಮೇಳನ ದ ಸ್ವಾಗತ ಸಮಿತಿಯ ಅಧ್ಯಕ್ಷರನ್ನಾಗಿ ಮಾನವಿ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ರಾಜ ವೆಂಕಟಪ್ಪ ನಾಯಕರವರು ಜವಾಬ್ದಾರಿ ವಹಿಸಲು ಪರಿಷತ್ತು ತೀರ್ಮಾನಿಸಿದೆ. ಜೊತೆಗೆ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ! ಜಯಪ್ರಕಾಶ್ ಪಾಟೀಲ್ ಇವರನ್ನು ಕಾರ್ಯಕಾರಿ ಸಮಿತಿಯ ಸದಸ್ಯರ ಒಮ್ಮತದಿಂದ ಆಯ್ಕೆ ಮಾಡಲಾಯಿತು. 9ನೇಯ ಈ ತಾಲೂಕ ಸಮ್ಮೇಳನ ಸರಳವಾಗಿ ಆಚರಿಸಲಾಗುತ್ತಿರುವುದರಿಂದ ಗೊಷ್ಠಿಗಳನ್ನ ಹೆಚ್ಚಿನ ಒತ್ತು ಕೊಡಲಾಗುವುದು ಮತ್ತು ಸಾಧಕರಿಗೆ, ಪರಿಷತ್ತಿನಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ, ಪತ್ರಕರ್ತರಿಗೆ, ದತ್ತಿದಾನಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಪರಿಷತ್ತಿನ ಸದಸ್ಯರುಗಳು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಮುಖಂಡರಾದ ಪಿ ಪರಮೇಶ್ವರ, ಬಸವರಾಜ ಬೊಗಾವತಿ, ಹ್ಯಾರಿಸ್ ಮತ್ತು ಇತರೇ ಪರಿಷತ್ತಿಪರಿಷತ್ತ ಸದಸ್ಯರುಗಳು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here