ನಾಯಕತ್ವ ಎನ್ನುವುದು ವ್ಯಕ್ತಿಯ ಹುಟ್ಟಿನಿಂದ ಬರುವುದಿಲ್ಲ ,ವ್ಯಕ್ತಿಯ ಬೆಳವಣಿಗೆಯಿಂದ ಬರುವಂತದ್ದು ಗಿರಿಧರ್ ಪೂಜಾರ್

ನಾಯಕತ್ವ ಎನ್ನುವುದು ವ್ಯಕ್ತಿಯ ಹುಟ್ಟಿನಿಂದ ಬರುವುದಿಲ್ಲ ,ವ್ಯಕ್ತಿಯ ಬೆಳವಣಿಗೆಯಿಂದ ಬರುವಂತದ್ದು ಗಿರಿಧರ್

0
123

ನಾಯಕತ್ವ ಎನ್ನುವುದು ವ್ಯಕ್ತಿಯ ಹುಟ್ಟಿನಿಂದ ಬರುವುದಿಲ್ಲ ,ವ್ಯಕ್ತಿಯ ಬೆಳವಣಿಗೆಯಿಂದ ಬರುವಂತದ್ದು ಗಿರಿಧರ

 

ಮಾನವಿ : ಜ 30 ಪಟ್ಟಣದ ಜನೋದಯ ಸಂಸ್ಥೆಯು ಹಮ್ಮಿಕೊಂಡಿದ್ದ ನಾಯಕತ್ವ ಕೌಶಲ್ಯ ತರಬೇತಿ ಶಿಬಿರದಲ್ಲಿ ಅತಿಥಿ ಸ್ಥಾನ ವಹಿಸಿ ಯುವಕರಿಗೆ -ಯುವತಿಯರಿಗೆ ಪ್ರೇರೇಪಿಸುವಂತೆ ಸಂಪನ್ಮೂಲ ವ್ಯಕ್ತಿ ಗಿರಿಧರ್ ಪೂಜಾರ್ ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರ ಪುಣ್ಯ ಸ್ಮರಣೆ ದಿನ ಹಾಗೂ ಯುವಕರಿಗೆ-ಯುವತಿಯರಿಗೆ ನಾಯಕತ್ವದ ಕೌಶಲ್ಯ ತರಬೇತಿ ಶಿಬಿರ ಕಾರ್ಯಕ್ರಮವನ್ನು ಜನೋದಯ ಸಂಸ್ಥೆಯ ಸಿಸ್ಟರ್ ಜೋಸ್ಟಿನ್ ಉದ್ಘಾಟಿಸಿದರು.

ನಂತರ ಈ ಶಿಬಿರಾರ್ಥಿಗಳಾಗಿ ಆಗಮಿಸಿದ್ದ ತಾಲೂಕಿನ ಸಂಪನ್ಮೂಲ ವ್ಯಕ್ತಿ ಗಿರಿಧರ್ ಪೂಜಾರ್ ಮಾತನಾಡಿ ಯುವಕರು- ಯುವತಿಯರು ನಾಯಕತ್ವದ ಗುಣವನ್ನ ಬೆಳೆಸಿಕೊಳ್ಳಬೇಕು , ಸಾಮಾಜದಲ್ಲಿ ವ್ಯಕ್ತಿಗೆ ಸ್ಥಾನಮಾನ ದೊರಕಿಸಿಕೊಳ್ಳುವಲ್ಲಿ ಯಶಸ್ಸಾಗಲು ನಾಯಕತ್ವ ಗುಣ ಮಹತ್ವವಾದದ್ದು ಎಂದರು.

ಮನುಷ್ಯನ ಜೀವನದಲ್ಲಿ ನಾಯಕತ್ವ ಎನ್ನುವುದು ಅವನ ಹುಟ್ಟಿನಿಂದ ಬರುವಂತದ್ದಲ್ಲ,ಬದಲಾಗಿ ಅವನ ಬೆಳವಣಿಗೆಯಿಂದ ನಾಯಕತ್ವದ ಗುಣ ಬರುವಂತದ್ದು,ವ್ಯಕ್ತಿಗೆ ಗುರಿ -ಕನಸು ಯೋಚನಾ ಶಕ್ತಿ,ದೂರದೃಷ್ಟಿ ಹೊಂದಿರಬೇಕಾಗುತ್ತದೆ ಎಂದು ಹೇಳಿದರು.

ಆರಂಭದಲ್ಲಿ ಮಹಾತ್ಮ ಗಾಂಧೀಜೀಯವರ ಭಾವ ಚಿತ್ರಕ್ಕೆ ಮಾಲಾರ್ಪಣೆ ನೆರವೇರಿಸಿ ,ಒಂದು ನಿಮಿಷ ಮೌನಾಚರಣೆ ಮಾಡಿದರು.

ಈ ಕೌಶಲ್ಯ ತರಬೇತಿ ಶಿಬೀರದಲ್ಲಿ ಸಿಸ್ಟರ್ ಜೋಸ್ಟಿನ್,ಸಿಸ್ಟರ್ ಮರ್ಸಿ,ಸಿಸ್ಟರ್ ಅಂಟಾ,ಮಹಾದೇವ,ಉರುಕುಂದ,ದುರುಗಮ್ಮ‌, ಮಾರ್ಟಿನ್,ಚಂದ್ರು ,ಯುವಕರು-ಯುವತಿಯರು ಭಾಗವಹಿಸಿ ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here