ವಕೀಲ ರವಿಕುಮಾರ್ ಪಾಟೀಲ್ ಹಾಗೂ ನಾಗಭೂಷಣ್ ರಿಗೆ ಅಭಿನಂದನಾ ಸಮಾರಂಭ.

ಗೆಳೆಯರ ಸಹಕಾರ ನೆನೆದು ಕಣ್ಣೀರಿಟ್ಟ ವಕೀಲರ ಸಂಘದ ಕಾರ್ಯದರ್ಶಿ ರವಿಕುಮಾರ್ ಪಾಟೀಲ್

0
153

ಮಾನವಿ :-  ಪಟ್ಟಣದ ಲಕ್ಷ್ಮೀ ರಂಗನಾಥ ಪತ್ತಿನ ಸಹಕಾರಿಯಿಂದ ವಕೀಲರ ಸಂಘದ ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ರವಿಕುಮಾರ್ ಪಾಟೀಲ್ ಅವರಿಗೆ ಹಾಗೂ ಕಲ್ಮಠ ಪದವಿ ಕಾಲೇಜಿನ ಪ್ರಾಚಾರ್ಯ ನಾಗಭೂಷಣ ಸ್ವಾಮಿಯರಿಗೆ ಕೆ ಪಿ ಟಿ ಸಿ ಎಲ್ ಸರ್ಕಾರಿ ಹುದ್ದೆ ಪಡೆದ ಹಿನ್ನೆಲೆಯಲ್ಲಿ ಲಕ್ಷ್ಮೀ ರಂಗನಾಥ ಸಹಕಾರಿಯ ಆಡಳಿತ ಸಿಬ್ಬಂದಿಗಳಿಂದ ವಿಶೇಷ ಸನ್ಮಾನ ಕಾರ್ಯಕ್ರಮ ಮಾಡಿದರು..

ನಂತರ ಸಹಕಾರಿಯ ಅಧ್ಯಕ್ಷ ಹಾಗೂ ವಕೀಲರ ಸಂಘದ ನೂತನ ಕಾರ್ಯದರ್ಶಿ ರವಿಕುಮಾರ್ ಪಾಟೀಲ್ ಮಾತಾನಾಡಿ ನಾನು ಕಡು ಬಡತನದಲ್ಲಿ ಬೆಳೆದರು ಕೂಡ ಇನ್ನೂ ಅನೇಕ ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವ ಉತ್ಸುಕನಾಗಿದ್ದು ಅದರಲ್ಲಿ ಬಹಳ ಪ್ರಮುಖವಾಗಿ ನನ್ನ ಬಾಲ್ಯದಿಂದ ಇಲ್ಲಿಯವರೆಗೆ ಗೆಳೆಯರ ಬಳಗದ ಸದಸ್ಯರಾದ ಗುರುಪಾದ ಸ್ವಾಮಿ. ಬಿಷ್ಟಪ್ಪ ಅಬ್ಬಿಗೇರಿ.ಯಲ್ಲಪ್ಪ ಪೂಜಾರಿ.ವಿರುಪಣ್ಣ ಪಾಟೀಲ್. ಎಂ ಜಗದೀಶ್. ಪ್ರಭಾಕರ್ ಪಾಟೀಲ್. ಇತ್ತೀಚಿನ ದಿನಗಳಲ್ಲಿ ಕಂಪ್ಯೂಟರ್ ಬಸವರಾಜ ಇವರ ಸ್ನೇಹ ಸಂಬಂಧ ಹಾಗೂ ಅವರ ಪ್ರೋತ್ಸಾಹದಿಂದ ನಾನು ಅಲ್ಪ ಮಟ್ಟಿಗಾದರು ಜನರಿಗೆ ಹತ್ತಿರವಾಗಲು ಸಾಧ್ಯವಾಯ್ತು ಎಂದರು ನಂತರ ನನ್ನ ಎಲ್ಲ ಕೆಲಸಗಳಿಗೆ ಬಲಗೈ ಆಗಿದ್ದ ಕುಚುಕು ಗೆಳೆಯ ನಾಗಭೂಷಣ ಸ್ವಾಮಿ ನನ್ನ ಜೀವನದ ಪ್ರತಿ ಕ್ಷಣಗಳಲ್ಲಿ ಕಷ್ಟ ನಷ್ಟಗಳಲ್ಲಿ ಭಾಗಿಯಾಗಿದ್ದನ್ನು ನೆನೆದು ವೇದಿಕೆಯಲ್ಲಿಯೇ ಕಣ್ಣೀರಿಟ್ಟರು ಅವರ ಯಶಸ್ಸನ್ನು ಬಯಸಿದರು.

ನಂತರ ವಿಶ್ವನಾಥ ಪಾಟೀಲ್ ಮೂಸ್ಟೂರು ವಕೀಲರು ಹಾಗೂ ನಾಗಭೂಷಣ ಸ್ವಾಮಿ ಮಾತಾನಾಡಿ ನಮ್ಮ ಸ್ನೇಹ ಸಂಬಂಧ ಯಾವ ರೀತಿಯಲ್ಲಿ ನಡೆದು ಬಂದಿದೆ ಅವರ ಸೇವೆಯನ್ನು ನೆನೆದು ಅವರು ಮುಂದಿನ ದಿನಗಳಲ್ಲಿ ಇನ್ನೂ ಯಶಸ್ವಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ನಂತರ ಲಕ್ಷ್ಮೀ ರಂಗನಾಥ ಪತ್ತಿನ ಸಹಕಾರಿಯಿಂದ ಪೂರ್ಣಿಮಾ ನಾಗಭೂಷಣ ಸ್ವಾಮಿ ದಂಪತಿಗಳಿಗೆ ಹಾಗೂ ರವಿಕುಮಾರ್ ಪಾಟೀಲ್ ಇವರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಲಕ್ಷ್ಮೀ ರಂಗನಾಥ ಸಹಕಾರಿಯ ಉಪಾಧ್ಯಕ್ಷ ಬಿ ಸತ್ಯನಾರಾಯಣ ಶೆಟ್ಟಿ

ಸಹಕಾರಿಯ ಅಧ್ಯಕ್ಷರಾದ ರವಿಕುಮಾರ್ ಪಾಟೀಲ್.

ನಾಗಭೂಷಣ ನಿರ್ದೇಶಕ.

ಶ್ಯಾಮಸುಂದರ ಶೆಟ್ಟಿ.ಸೇರಿದಂತೆ ನಿರ್ದೇಶಕ ಹುಸೇನ್ ಸಾಬ್.ಮಾರುತಿ. ಮಲ್ಲನಗೌಡ ದಿದ್ದಿಗಿ. ಸಿ ಇ ಓ ಬಸವರಾಜ.

ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು..

LEAVE A REPLY

Please enter your comment!
Please enter your name here