ಬಿಇಓ ವರ್ತನೆ ಖಂಡಿಸಿ ನ.23 ರಂದು ತಡಕಲ್ ಗ್ರಾಮಸ್ಥರಿಂದ ಶಾಲೆಗೆ ಬೀಗ

ತಡಕಲ್ ಶಾಲೆ ಮುಖ್ಯ ಶಿಕ್ಷಕ ಸದಾಶಿವಪ್ಪನರ ವಿರುದ್ಧ ಕ್ರಮ ಸರಿಯಲ್ಲ ಬಿಇಓ ವರ್ತನೆ ಖಂಡಿಸಿ ನ.23 ರಂದು ಗ್ರಾಮಸ್ಥರಿಂದ ಶಾಲೆಗೆ ಬೀಗ ಶಾಲೆ ಎಸ್‌ಡಿಎಮ್‌ಸಿ ಸಮಿತಿ ವಿಸರ್ಜನೆಗೆ ಮುಂದಾದ ಸದಸ್ಯರು

0
327

ಬಿಇಓ ವರ್ತನೆ ಖಂಡಿಸಿ ನ.23 ರಂದು ತಡಕಲ್ ಗ್ರಾಮಸ್ಥರಿಂದ ಶಾಲೆಗೆ ಬೀಗ. 

ಮಾನವಿ, ನ.21- ಮಾನವಿ ತಾಲೂಕಿನ ತಡಕಲ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಸದಾಶಿವಪ್ಪನವರನ್ನು ಕಾನೂನು ಬಾಹಿರವಾಗಿ ಶಾಲೆ ಎಸ್‌ಡಿಎಮ್‌ಸಿ ಸಮಿತಿ ಗಮನಕ್ಕೆ ತರದೆ ಬಿಇಓ ವೆಂಕಟೇಶ ಗುಡ್ಯಾಳ ಅವರು ಡೆಪುಟೇಶನ್ ಮಾಡಿರುವ ಕ್ರಮ ಖಂಡಿಸಿ ಗ್ರಾಮಸ್ಥರು ನ.೨೩ ರಂದು ಶಾಲೆಗೆ ಬೀಗ ಹಾಕಿ ಗ್ರಾಮಕ್ಕೆ ಸರ್ಕಾರಿ ಶಾಲೆ ಬೇಡವೆಂದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಸ್‌ಡಿಎಮ್‌ಸಿ ಅಧ್ಯಕ್ಷ ಜೋತಿರ್ಲಿಂಗನಗೌಡ ತಡಕಲ್ ಹೇಳಿದರು.

ಇಂದು ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ.೧೯ರಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಡಕಲ್ ಶಾಲೆ ಮುಖ್ಯ ಶಿಕ್ಷಕ ಸದಾಶಿವಪ್ಪನವರು ರಜೆಯಲ್ಲಿ ಇರುವ ವೇಳೆ ಏಕಾಏಕಿಯಾಗಿ ಶಾಲೆಗೆ ಬಂದು ಒತ್ತಾಯ ಪೂರ್ವಕವಾಗಿ ಮುಖ್ಯ ಶಿಕ್ಷಕನನ್ನು ಬಿಡುಗಡೆ ಮಾಡುವ ಮೂಲಕ ಬಿಇಓ ವೆಂಕಟೇಶ ಗುಡ್ಯಾಳ ಅವರು ಎಸ್‌ಡಿಎಮ್‌ಸಿ ಸಮಿತಿ ಗಮನಕ್ಕೆ ತರದೆ ಏಕಪಕ್ಷಿಯವಾಗಿ ಕ್ರಮಕೈಗೊಂಡಿದ್ದಾರೆ. ಸ್ವತಃ ಪಾಕಲರೆ ವಾಲ್ಮೀಕಿ ಜಯಂತಿಯಂದು ಗ್ರಾಮದ ಶಾಲೆಗೆ ಮಕ್ಕಳನ್ನು ಕಳುಹಿಸಿರುತ್ತಾರೆ. ಈ ಬಗ್ಗೆ ಬಿಇಓ ಅವರು ತಪ್ಪಾಗಿ ಭಾವಿಸಿ ಮುಖ್ಯ ಶಿಕ್ಷಕನ ವಿರುದ್ಧ ದೂರು ಬಂದಿದೆ ಎಂದು ಕ್ರಮಕೈಗೊಂಡಿರುವ ಘಟನೆ ಸರಿಯಲ್ಲ.ರ ಗಮನಕ್ಕೆ ದೂರು ಬಂದ ಕೂಡಲೇ ಅಧಿಕಾರಿಗಳು ಶಾಲೆ ಸುಧಾರಣ ಸಮಿತಿ ಸದಸ್ ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವ ಶಾಲೆ ಶಿಕ್ಷಕರ ಮೇಲೆ ಈ ರೀತಿಯ ಕ್ರಮ ಜರುಗಿರುವ ಘಟನೆಯಿಂದಾಗಿ ಇನ್ನೂಳಿದ ಶಿಕ್ಷಕರು ಶಾಲೆಗೆ ಬರಲು ಹಿಂದೇಟು ಹಾಕುತ್ತೀದ್ದಾರೆ.

ತಡಕಲ್ ಗ್ರಾಮದ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಶಿಕ್ಷಕರ ಕೊರತೆ ಇದೆ. ಒಟ್ಟು ೧೪ ಶಿಕ್ಷಕರು ಶಾಲೆಗೆ ಬೇಕಿದೆ ಆದರೆ ಪ್ರಸ್ತುತ ೭ ಜನ ಶಿಕ್ಷಕರು ಮಾತ್ರ ಇದ್ದಾರೆ. ಶಾಲೆಗೆ ಉಳಿದ ಶಿಕ್ಷಕರನ್ನು ನೇಮಕ ಮಾಡುವ ಬಗ್ಗೆ ಅನೇಕ ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಗ್ರಾಮಸ್ಥರ ಜೊತೆ ಮನವಿ ಮಾಡಿದರು ಯಾವುದೆ ಕ್ರಮಕ್ಕೆ ಮುಂದಾಗಿಲ್ಲ. ಶಿಕ್ಷಕರ ಕೊರತೆಯಿಂದಾಗಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ತಡಕಲ್ ಗ್ರಾಮದಲ್ಲಿ ಹೈಸ್ಕೂಲ್ ಆರಂಭವಾಗಿದ್ದು ಈಗಲೂ ಶಿಕ್ಷಕರ ಕೊರತೆ ಇದೆ. ಈ ಬಗ್ಗೆ ಬಿಇಓ ಅಧಿಖಾರಿಗಳು ಗಮನ ನೀಡುತ್ತಿಲ್ಲ. ಆದರೇ ಪ್ರಸ್ತುತ ಇರುವ ಶಿಕ್ಷಕರ ಜೊತೆ ಶಾಲೆಯನ್ನು ನಡೆಸಿಕೊಂಡು ಹೋಗಲಾಗುತ್ತಿದೆ. ಇಂತಃ ಸಂದರ್ಭದಲ್ಲಿ ಶಾಲೆ ಮುಖ್ಯ ಶಿಕ್ಷಕನನ್ನು ಏಕಾಏಕಿಯಾಗಿ ಬೇರೆ ಶಾಲೆಗೆ ಡೆಪುಟೇಶನ್ ಹಾಕಿರುವದು ಶಾಲೆಯ ಅಭಿವೃದ್ಧಿ ಮತ್ತು ಕಲಿಕೆಗೆ ತೊಂದರೆಯಾಗುತ್ತಿದೆ.

ಕೂಡಲೇ ರಾಯಚೂರು ಡಿಡಿಪಿಐ ಅವರು ಮತ್ತು ಬಿಇಓ ಅವರು ಶಾಲೆಗೆ ೧೪ ಜನ ಶಿಕ್ಷಕರನ್ನು ಕಾಯಂ ನೇಮಕ ಮಾಡಬೇಕು. ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಬೇರೆ ಯಾವುದೊ ಒತ್ತಡಕ್ಕೆ ಮಣಿದು ಶಿಕ್ಷಕರ ಮೇಲೆ ಕಾನೂನು ಬಾಹಿರವಾಗ ಕ್ರಮ ಜರುಗಿಸಿರುವದು ಸರಿಯಲ್ಲ ಎಂದು ಶಾಲೆ ಸುಧಾರಣ ಸಮಿತಿ ಸದಸ್ಯರು ಬಿಇಓ ಅವರ ವರ್ತನೆಯನ್ನು ಖಂಡಿಸಿದರು. ಈ ಸಂದರ್ಭದಲ್ಲಿ ತಡಕಲ್ ಗ್ರಾಮಸ್ಥರು ಮತ್ತು ಶಾಲೆ ಎಸ್‌ಡಿಎಮ್‌ಸಿ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here