ಹಬ್ಬದ ಅಂಗವಾಗಿ ಕುಡಿಯುವ ನೀರು ಹರಿಸಲು ಭಾಜಪ ಒತ್ತಾಯ

ಹಬ್ಬದ ದಿನ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂದು ಭಾಜಪಾ ಒತ್ತಾಯ.

0
179

ಹಬ್ಬದ ಅಂಗವಾಗಿ ಕುಡಿಯುವ ನೀರು ಹರಿಸಲು ಭಾಜಪ ಒತ್ತಾಯ.

ಮಾನ್ವಿ, ನ.13- ದಿನಾಂಕ 14, 15 & 16-11-2020 ದಿನಗಳಂದು ದೀಪಾವಳಿ ಹಬ್ಬ ವಿದ್ದ ಪ್ರಯುಕ್ತ ಪಟ್ಟಣದ ಎಲ್ಲಾ ವಾರ್ಡಗಳಲ್ಲಿ ಕುಡಿಯುವ ನೀರು ಹರಿಸುವಂತೆ ಭಾರತೀಯ ಜನತಾ ಪಾರ್ಟಿ, ಮಹಾಶಕ್ತಿ ಕೇಂದ್ರ ಶುಕ್ರವಾರ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವರ್ಷ ತುಂಬಾ ಮಳೆಯಾಗಿದ್ದು, ತುಂಗಭದ್ರಾ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದೆ, ಅಲ್ಲದೇ ಮಾನವಿ ಪಟ್ಟಣಕ್ಕೆ ಕುಡಿಯುವ ನೀರಿನ ಸಲುವಾಗಿ ಹೊಸ ಕೆರೆ ನಿರ್ಮಾಣವಾಗಿದ್ದರೂ ಸಹ ಪಟ್ಟಣಕ್ಕೆ 8-10 ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡುತ್ತಿರುವುದು ಪಟ್ಟಣದ ಸಾರ್ವಜನಿಕರ ದುರದೃಷ್ಟಕರ ಸಂಗತಿಯಾಗಿದೆ, ನವೆಂಬರ್ 14-11-2020 ರಿಂದ 16-11-2020 ದೀಪಾವಳಿ
ಇರುವುದರಿಂದ ವ್ಯಾಪಾರಸ್ತರು ತಮ್ಮ ಅಂಗಡಿ ಮತ್ತು ಮನೆಗಳಿಗೆ ಬಣ್ಣ ಬಡಿದು, ಮೂರು ದಿನಗಳ ಕಾಲ ಪೂಜೆ ಕಾರ್ಯಗಳನ್ನು ಮಾಡುತ್ತಿರುವುದರಿಂದ ಅತಿಯಾದ ಬಳಕೆಯಾಗುತ್ತದೆ, ಆದ್ದರಿಂದ ಈ ಮೂರು ದಿನಗಳ ಕಾಲ ದಿನಂಪ್ರತಿ ಮತ್ತು ಇನ್ನು ಮುಂದೆ ದಿನಂಪ್ರತಿ ಮಾನ್ವಿ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರ ಮಹಾಶಕ್ತಿ ಕೇಂದ್ರದ ವಿ.ಜನಾರ್ಧನ, ಉಪಾಧ್ಯಕ್ಷ ವೆಂಕಟೇಶ ನಾಯಕ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾಯಕ ಇದ್ದರು.

LEAVE A REPLY

Please enter your comment!
Please enter your name here