ಯೋಗಿತಾ ಬಾಯಿ ಮೇಲೆ ಹಲ್ಲೆ : ಹಲವು ಸಂಘಟನೆಗಳ ಪ್ರತಿಭಟನೆ
ಸಿಂಧನೂರು,ನ.6 – ಎಸಿಡಿಪಿಓ ಯೋಗಿತಾ ಬಾಯಿ ಮೇಲೆ ಹಲ್ಲೆ ಇಂದಿರಾ ಗಾಂಧಿ ಸ್ತಿçÃಶಕ್ತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶ್ರೀದೇವಿ ಶ್ರೀನಿವಾಸ ಹಲ್ಲೆ ಮಾಡಿರುವದನ್ನು ಖಂಡಿಸಿ ಸರ್ಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾ ಘಟಕ, ಕರ್ನಾಟಕ ರಕ್ಷಣಾ ಪಡೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ ಶೆಟ್ಟಿ ಬಣ) ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ಅವ್ಯವಹಾರಕ್ಕೆ ಸಂಬAಧಿಸಿದAತೆ ಪರಿಶೀಲನೆಗೆ ಹೋಗಿದ್ದ ಎಸಿಡಿಪಿಓ ಅವರಿಗೆ ಸ್ಪಂದಿಸದೇ ಅವರ ಮೇಲೆ ಹಲ್ಲೆ ಮಾಡಿರುವ ಮಹಿಳಾ ಒಕ್ಕೂಟದ ಅಧ್ಯಕ್ಷ ಶ್ರೀದೇವಿ ಶ್ರೀನಿವಾಸ ಕಾರ್ಯವೈಖರಿ ಖಂಡನೀಯ. ಅವ್ಯವಹಾರ ನಡೆದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು. ಹಲ್ಲೆ ಮಾಡಿದ ಶ್ರೀದೇವಿ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಎಸಿಡಿಪಿಓ ಯೋಗಿತಾ ಬಾಯಿಯವರಿಗೆ ರಕ್ಷಣೆ ಒದಗಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕಾ ಘಟಕ ತಾಲೂಕಾಧ್ಯಕ್ಷ ಚಂದ್ರಶೇಖರ ಹಿರೇಮಠ, ಪ್ರಧಾನ ಕಾರ್ಯದರ್ಶಿ ಭರತ್ಕುಮಾರ, ಎಸಿಡಿಪಿಓ ಯೋಗಿತಾ ಬಾಯಿ, ವಿ.ಬಸವರಾಜ, ಶಶಿಧರ ಹಳ್ಳಿ, ಹನುಮಂತ sÁಗವಹಿಸಿದ್ದರು.ಪ್ಪ ನಾಯಕ, ಶಿವಕುಮಾರ ಸಗರಮಠ, ಜಗದೀಶ ಓತೂರು, ಲಿಂಗಪ್ಪ, ಕರ್ನಾಟಕ ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಮೌನೇಶ ದೊರೆ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಅಧ್ಯಕ್ಷ ವೈ.ಬಿ.ಸುರೇಶ ಕಟ್ಟಿಮನಿ, ಕರ್ನಾಟಕ ರಕ್ಷಣಾ ಪಡೆಯ ತಾಲೂಕಾಧ್ಯಕ್ಷ ಜಮೀರ ಪಾಷಾ, ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ವೀರೇಶ ಭಾವಿಮನಿ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.