ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷರಾಗಿ ಹೆಚ್.ಸೂಲಂಗಿ ಆಯ್ಕೆ
ಸಿಂಧನೂರು,ನ.6 – ಮಾದಿಗ ಮೀಸಲಾತಿ ಹೋರಾಟ ಸಮಿತಿಗೆ ನೂತನ ತಾಲೂಕಾಧ್ಯಕ್ಷರಾಗಿ ಹೆಚ್.ಸೂಲಂಗಿ ಆಯ್ಕೆಯಾಗಿದ್ದಾರೆ.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ರಾಜ್ಯ ಮುಖಂಡ ಅಂಬಣ್ಣ ಆರೋಲಿಕರ್, ಜಿಲ್ಲಾ ಅಧ್ಯಕ್ಷ ಜೆ.ಅಬ್ರಾಹಂ ಹೊನ್ನಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಪಿ.ಅನಿಲಕುಮಾರ, ಉಪಾಧ್ಯಕ್ಷ ಸುರೇಶ ಅಂತರಗAಗಿ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ತಾಲೂಕಾ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿ ಅಶೋಕ ಮ್ಯಾಗಳಮನಿ, ಉಪಾಧ್ಯಕ್ಷರಾಗಿ ಹನುಮಂತ ಮಾವಿನಮಡ್ಗು, ಗುಡದಪ್ಪ ಕುರುಕುಂದಾ, ಸವಲಿ ಮಾಡಶಿರವಾರ, ಶಿವಪ್ಪ ಬೇವಿನಮರದ, ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿ ಮಾರುತಿ ವಿರುಪಾಪುರ, ಸಹ ಕಾರ್ಯದರ್ಶಿಯಾಗಿ ಹನುಮಂತ ಕರ್ನಿ, ಕೃಷ್ಣ ಸಿದ್ರಾಂಪುರ, ಖಜಾಂಚಿಯಾಗಿ ರಮೇಶ ಸಿದ್ರಾಂಪುರ ನೇಮಕ ಮಾಡಲಾಯಿತು.
ಸಭೆಯಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಸಂಬAಧಿಸಿದAತೆ ಹೋರಾಟಗಳ ಕುರಿತು ಚರ್ಚಿಸಲಾಯಿತು. ತಾಲೂಕಾ ಪದಾಧಿಕಾರಿಗಳು, ಜಿಲ್ಲೆಯ ವಿವಿಧ ತಾಲೂಕಾ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.