ಜಮಾಅತೆ ಇಸ್ಲಾಮ್ ಹಿಂದ್ ವತಿಯಿಂದ ಬಸ್‌‌ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ

ಪ್ರವಾದಿ ಮಹಮ್ಮದ್ ಮಾನವತೆಯ ಮಾರ್ಗದರ್ಶಕರು ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಥಳೀಯ ಜಮಾಅತೆ ಇಸ್ಲಾಮಿ ಹಿಂದ್ ಶಾಖೆಯಿಂದ ಹಮ್ಮಿಕೊಂಡಿರುವ 15 ದಿನದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ

0
282

ಸಿಂಧನೂರು, ನ. 01- ಜಮಾಅತೆ ಇಸ್ಲಾಮ್ ಹಿಂದ್ ವತಿಯಿಂದ ಬಸ್‌‌ ನಿಲ್ದಾಣದಲ್ಲಿ ಸ್ವಚ್ಛತಾ ಕಾರ್ಯಕ್ರಮ
15 ದಿನದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ.
ಪ್ರವಾದಿ ಮಹಮ್ಮದ್ ಮಾನವತೆಯ ಮಾರ್ಗದರ್ಶಕರು ಎಂಬ ಶೀರ್ಷಿಕೆ ಅಡಿಯಲ್ಲಿ ಸ್ಥಳೀಯ ಜಮಾಅತೆ ಇಸ್ಲಾಮಿ ಹಿಂದ್ ಶಾಖೆಯಿಂದ ಹಮ್ಮಿಕೊಂಡಿರುವ 15 ದಿನದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.

15 ದಿನದ ಅಭಿಯಾನದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ, ರಕ್ತ ಪರೀಕ್ಷಾ ಶಿಬಿರ, ಕಾಲೋನಿ ಮಟ್ಟದಲ್ಲಿ ಪ್ರವಾದಿ ಅವರ ಜೀವನ ಚರಿತ್ರೆ ಕುರಿತು ಉಪನ್ಯಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಜಮಾಅತೆ ಇಸ್ಲಾಮಿ ಹಿಂದ್ ನ ಮುಖಂಡರು ಹಮ್ಮಿಕೊಂಡಿದ್ದಾರೆ‌. ಭಾನುವಾರ ನಗರದ ಬಸ್ ನಿಲ್ದಾಣದಲ್ಲಿ ನಗರಸಭೆ ಸಹಕಾರದಿಂದ ಜೆಸಿಬಿಗಳ ಮೂಲಕ ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ನಡೆಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್, ಸದಸ್ಯ ಆಲಂಭಾಷಾ, ಜಮಾಅತೆ ಇಸ್ಲಾಮಿ ಹಿಂದ್ ಅಭಿಯಾನದ ಸಂಚಾಲಕ ಟಿ.ಹುಸೇನ್ ಸಾಬ್, ಸಹ ಸಂಚಾಲಕ ಖಾದರ್ ಸುಭಾನಿ, ಮುಖಂಡರಾದ ಬಾಬರ್ ಬೇಗ್, ಮೌಲಾಸಾಬ್ ಪರಾಪುರ, ಹುಸೇನ್ ಭಾಷಾ, ಮೌಲಾಸಾಬ್ ಪಿಡಿಒ, ಚಾಂದ್ ಪಾಷಾ ಜಾಹಗೀರ್ದಾರ್, ಜಾನಿಮೀಯಾ ಸಾಬ್, ಎಸ್ಐಓ ಕಾರ್ಯಕರ್ತರಾದ ನೂರ್ ಮಹಮದ್, ಡಾ.ವಸೀಮ್, ಓಸಮಾ ಮೌಲ್ವಿ, ಉಮರ್ ರಿಜ್ವಿ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here