ಒಂದು ದಿನದ ಉಪವಾಸ; ಜಯ ಬಸವ ಮೃತ್ಯುಂಜಯ ಸ್ವಾಮೀಜಿ

0
133

ಕೊಟ್ಟೂರು, ಅ.27: ರಾಜ್ಯದಲ್ಲಿ ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ವರ್ಗಗಳ ಪ್ರವರ್ಗ ‘2ಎ’ಗೆ ಸೇರಿಸುವಂತೆ ಆಗ್ರಹಿಸಿ ನಾಳೆ ಬೆಳಗಾವಿ ಸುವರ್ಣ ವಿಧಾನಸೌಧದ ಎದುರು ಒಂದು ದಿನದ ಉಪವಾಸ ಸಮಾಜ ಬಂಧುಗಳೊಂದಿಗೆ ಸತ್ಯಾಗ್ರಹವನ್ನು ನಡೆಸಲಾಗುತ್ತಿದೆ ಎಂದುಕೂಡಲ ಸಂಗಮ ಪಂಚಮಸಾಲಿ ಪೀಠದ ಜಯ ಬಸವ ಮೃತ್ಯುಂಜಯ ಸ್ವಾಮೀಜಿಯವರು ಹೇಳಿದರು.
ಪಂಚಮಸಾಲಿ ಸಮುದಾಯ ಪ್ರವರ್ಗ ‘3ಬಿ’ ಪಟ್ಟಿಯಲ್ಲಿದೆ.

ಇದರಿಂದ ಸಮುದಾಯಕ್ಕೆ ಅನ್ಯಾಯ ಆಗುತ್ತಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಂಚಮಸಾಲಿ‌‌ ಸಮುದಾಯವನ್ನು ಪ್ರವರ್ಗ ‘2ಎ’ಗೆ ಸೇರಿಸಬೇಕು’ ಪಂಚಮಸಾಲಿ ಸಮುದಾಯದ 16 ಶಾಸಕರು ಮತ್ತು ಮೂವರು ಸಂಸದರು ಹಾಗೂ ಸಮಾಜ ಬಂಧುಗಳು ಭಾಗವಹಿಸಲಿದ್ದಾರೆ ಎಂದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಪಂಪಾಪತಿ ಅಂಗಡಿ, ಕೋನಾಪುರ ಬಸವರಾಜ ಸೇರಿದಂತೆ ಆನೇಕರಿದ್ದರು.

LEAVE A REPLY

Please enter your comment!
Please enter your name here