UP CM ಯೋಗಿಯ ಸರ್ಕಾರ ವಜಾ ಮಾಡಬೇಕು. ಎಸ್ಟಿ ಕಾಂಗ್ರೇಸ್ ಒತ್ತಾಯ

0
138

ರಾಯಚೂರು.ಅ.05- ಉತ್ತರ ಪ್ರದೇಶ ದಲಿತ ಬಾಲಕಿಯ ಮೇಲೆ ಅತ್ಯಾಚಾರ ವೆಸಗಿ, ಭೀಕರ ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಬೇಕು ಹಾಗೂ ದುರಾಡಳಿತ ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧಿಕಾರದಿಂದ ತೊಲಗಿಸುವಂತೆ ರಾಷ್ಟ್ರಪತಿಗಳಿಗೆ ಪರಿಶಿಷ್ಟ ಪಂಗಡ ವಿಭಾಗದ ಜಿಲ್ಲಾ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಉತ್ತರ ಪ್ರದೇಶ ಹತ್ರಾಸ್ ಗ್ರಾಮದಲ್ಲಿ ಮನಿಶಾ ಎಂಬ ಬಾಲಕಿಯ ಅತ್ಯಾಚಾರ ತೀವ್ರವಾಗಿ ಖಂಡಿಸುತ್ತೇವೆ. ಅತ್ಯಾಚಾರ ವೆಸಗಿದ ಆರೋಪಿಗಳಿಗೆ ಶಿಕ್ಷಿಸಬೇಕಾದ ಅಲ್ಲಿಯ ಬಿಜೆಪಿ ಸರ್ಕಾರ ಅವರ ರಕ್ಷಣೆಗೆ ನಿಂತಿರುವುದು ಖಂಡನೀಯ. ಈ ಹಿನ್ನೆಲೆಯಲ್ಲಿ ತಕ್ಷಣವೇ ಆರೋಪಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡುವುದಲ್ಲದೇ, ಈ ಪ್ರಕರಣದಲ್ಲಿ ಬಾಲಕಿಗೆ ರಕ್ಷಣೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾದ ಯೋಗಿ ಆದಿತ್ಯನಾಥ ಸರ್ಕಾರ ವಜಾಗೊಳಿಸಬೇಕೆಂದು ಒತ್ತಾಯಿಸಲಾಯಿತು. ಜಿಲ್ಲಾಧ್ಯಕ್ಷ ಕೆ.ನರಸಿಂಹ ನಾಯಕ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎನ್.ತಾಯಣ್ಣ ನಾಯಕ, ವೆಂಕಟೇಶ ಬಿಚ್ಚಾಲಿ, ವೆಂಕಟೇಶ ನಾಯಕ ಮನ್ಸಲಾಪೂರು, ವೈ.ಹನುಮಂತ ನಾಯಕ, ಶಿವಕುಮಾರ ನಾಯಕ, ರಾಮ ಸಿಂಗನೋಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here