ಗಬ್ಬೂರು.ಅ.04- ದೇವದುರ್ಗ ತಾಲೂಕಿನ ಗಬ್ಬೂರು ಪಟ್ಟಣದಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ವತಿಯಿಂದ ನಾಡ ಕಛೇರಿ ಉಪ ತಹಶಿಲ್ದಾರ ಅವರಿಗೆ ಅಧಿಕವಾಗಿ ಹಿಂದೂಳಿದ ಕುರುಬ ಜನಾಂಗವನ್ನು ಎಸ್ಟಿಗೆ ಸೇರಿಸಬೇಕೆಂದು ಮನವಿ ಪತ್ರ ಸಲ್ಲಿಸಿದರು.
ಗಬ್ಬೂರು ಅಧ್ಯಕ್ಷರಾದ ಮರಿಲಿಂಗ ಬೊಮ್ಮನಾಳ ಮಾತನಾಡುತ್ತಾ ರಾಜ್ಯದಲ್ಲಿ ಕುರುಬ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸರಕಾರದಿಂದ ನಮ್ಮ ಸಮಾಜಕ್ಕೆ ಅನ್ನಾಯವಾಗಿದೆ, ಗುಡ್ಡ- ಬೆಟ್ಟಗಳಲ್ಲಿ ಕುರಿಗಳನ್ನು ಕಾಯುತ್ತಾ ಅಲೆಮಾರಿ ಜೀವನ ನಡೆಸುತ್ತಿದ್ದಾರೆ. ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕುರುಬ ಜನಾಂಗದವನ್ನು ಎಸ್ಟಿಗೆ ಸೇರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮೂಕಯ್ಯ ತಾತ ಗುರುವಿನ್, ಸಿದ್ಧಯ್ಯ ತಾತ ಗುರುವಿನ್, ಕರ್ನಾಟಕ ಪ್ರದೇಶ ಯವ ಕುರುಬರು ಜಿಲ್ಲಾ ಘಟಕದ ಅಧ್ಯಕ್ಷರದ ಅಯ್ಯಪ್ಪ, ಸುಗರಡ್ಡಿ,ಗುರುಪಾದ,ಲಿಂಗರಾಜ,ಹಂಪನಗೌಡ, ನಿಂಗಯ್ಯ,ಕಾಳಿಂಗರಾಯ, ಹನುಮಂತ, ಸುರೇಶ,ಲಿಂಗಣ್ಣ, ಬೂದಿಬಸವ, ಶರುಭಣ್ಣ, ಹೊನ್ನಪ್ಪ ಲಿಂಗಯ್ಯ ಪೂಜಾರಿ ಗಂಗಪ್ಪ, ರಾಮಕೃಷ್ಣ ಸೇರಿದಂತೆ ಅನೇಕರಿದ್ದರು.