ಮಾನ್ವಿ:ಏ.07. ಮಹಾಮಾರಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗಬಾರದೆಂಬ ಉದ್ದೇಶದಿಂದ ಭಾರತ ಲಾಕ್ ಡೌನ್ ಮಾಡಲಾಗಿದ್ದರಿಂದ ಕಡು ಬಡವರಿಗೆ ಹಿಂದುಳಿದ ವರ್ಗದಿಂದ ದಿನನಿತ್ಯದ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಯಿತು.
ಪಟ್ಟಣದ ಗಂಗಾ ಮಾತೆ ಭವನದಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದಿಂದ ಕಡು ಬಡವರಿಗೆ ಮತ್ತು ನಿರ್ಗತಿಕ ಕೂಲಿ ಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಲಾಯಿತು.
ನಂತರ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷರಾದ ಎಂ ಪ್ರವೀಣ್ ಕುಮಾರ್ ಅವರು ಮಹಾಮಾರಿ ಕೊರೊನಾ ವೈರಸ್ ನಿಂದ ಪ್ರಪಂಚವೇ ತಲ್ಲಣಾಗಿದೆ. ಕರೋನಾ ವೈರಸ್ ಬಾರದಂತೆ ನಮ್ಮನ್ನು ನಾವೇ ರಕ್ಷಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ
ಕಾರ್ಯಾಧ್ಯಕ್ಷರು ಜಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ನರಸಿಂಹ ಹೆಳವರು, ಉಪಾಧ್ಯಕ್ಷರಾದ ವೆಂಕಣ್ಣ ಯಾದವ್, ಸತ್ಯನಾರಾಯಣ ವಕೀಲರು ಮುಸ್ಟೂರು, ತೊಗಟವೀರ ಕ್ಷತ್ರಿಯ, ಬಿ ರಾಮದಾಸ್, ನಾಗೇಶ್ ಕಬ್ಬೇರ್, ಸಮಾಜದ ಮುಖಂಡರಾದ ವೆಂಕಣ್ಣ ಮಾಸ್ಟರ್, ಸತೀಶ್ ಕುಮಾರ್, ಧನಂಜಯ್ ಪತ್ತಾರ್, ವಿರೂಪಾಕ್ಷಪ್ಪ ಹೂಗಾರ್, ಕಂಪ್ಲಿ ಮಲ್ಲಿಕಾರ್ಜುನ್’ ಕನಕಪ್ಪ ಯಾದವ್, ರಾಘವೇಂದ್ರ ಉ೦ದ್ಯಾಲ, ಉಮಾಪತಿ, ಭೀಮರಾಯ ಶೀತಿಮನಿ, ಬಸವರಾಜ್ ಮೇಸ್ತ್ರಿ, ಯಲ್ಲಪ್ಪ ಮಡಿವಾಳ, ಮೌಲಪ್ಪ ಚಿಕಲಪರ್ವಿ, ನಾಗರಾಜು ಉಪ್ಪಾರ, ರಾಮ್ ಸಿಂಗ್ ಕಾಗೆಯನ್ನು ಉಪಸ್ಥಿತರಿದ್ದರು