ರಾಯಚೂರು,ಮಾ.03.- ತಾವೆಲ್ಲರೂ ಸ್ವಯಂ ಸೇವಕರಾಗಿ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿ ಸಮಾಜ ಸೇವೆಯ ಕಾರ್ಯ ಮಾಡುತ್ತಿರುವದು ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಸಿ.ಬಿ. ವೇದಮೂರ್ತಿ ಅವರು ಅಭಿಪ್ರಾಯಪಟ್ಟರು.
ಅವರು ಇಂದು ನಗರದ ಶಂಶಾಲಂ ದರ್ಗಾದ ಮುಂದಿನ ಖಬರಸ್ಥಾನದಲ್ಲಿ ಡಾ. ನಾನಾಸಾಹೇಬ್ ಧರ್ಮಾಧಿಕಾರಿ ಪ್ರತಿಷ್ಠಾನ ರೇವದಂಡಿ ತಾ. ಅಲಿಬಾಗ್ ಜಿ ರಾಯಬಾಗ್ ಮಹಾರಾಷ್ಟ್ರ ರಾಜ್ಯದ ವತಿಯಿಂದ ಸ್ಮಶಾನ ಭೂಮಿಗಳ ಸ್ವಚ್ಚತಾ ಅಭಿಯಾನವನ್ನು ಚಾಲನೆ ನೀಡಿ ಮಾತನಾಡಿದರು.
ಸ್ವಚ್ಚತೆ ಕಾಪಾಡುವುದರಿಂದ ಪರಿಸರ ಸ್ವಚ್ಚವಾಗಿ ಆರೋಗ್ಯಯುತವಾದ ಜೀವನ ನಡೆಸಲು ಸಹಕಾರಿಯಾಗುತ್ತದೆ ಈ ನಿಟ್ಟಿನಲ್ಲಿ ಎಲ್ಲರೂ ಸಮಾಜ ಸೇವೆ ಮಾಡುತ್ತಿರುವುದು ಸಂತಸದಾಯಕವಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾದ ವಿಜಯ ಲಕ್ಕುಂಡಿ ಮತ್ತು ನೂರಾರು ಸಂಖ್ಯೆಯ ಸ್ವಯಂ ಸೇವಕರು ಭಾಗವಹಿಸಿದ್ದರು.